ರಾಜ್ಯ

XBB.1.5 ವೈರಸ್ ಭಯ ಬೇಡ, ಆದರೆ, ಅನಗತ್ಯವಾಗಿ ಮನೆಯಿಂದ ಹೊರಹೋಗಬೇಡಿ

ಭಾರತದಲ್ಲಿ ಎಕ್ಸ್‍ಬಿಬಿ 1.5 ನ ಹೊಸ ಕೋವಿಡ್ ರೂಪಾಂತರದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಇಲ್ಲಿನ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ ಎಂ ವಾಲಿ ಹೇಳಿದ್ದಾರೆ. ದೇಶದ ಜನಸಂಖ್ಯೆಯ ಶೇ. 90% ರಷ್ಟು ಲಸಿಕೆ ಪಡೆದಿದ್ದಾರೆ ಅಲ್ಲದೆ 30 ರಿಂದ 40% ಬೂಸ್ಟರ್ ಡೋಸ್‍ಗಳನ್ನು ನೀಡಲಾಗಿದೆ .

ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಆದಾಗ್ಯೂ, ಎಚ್ಚರಿಕೆಯಿಂದಿರಿ ಮತ್ತು ಅನಗತ್ಯವಾಗಿ ಹೊರಗೆ ಕಾಲಿಡದಂತೆ ಜನರಿಗೆ ಸಲಹೆ ನೀಡಿದ್ದಾರೆ.ವಿಶೇಷವಾಗಿ ತಮ್ಮ ಹಿರಿಯರು ಮತ್ತು ಮಕ್ಕಳನ್ನು ಪ್ರತ್ಯೇಕವಾಗಿರಿಸುವಂತೆ ತಿಳಿಸಿದ್ದು ಮುಖ್ಯವಾಗಿ ಮಾಸ್ಕ ಆದಷ್ಟು ಬಳಸಬೇಕೆಂದು ಅವರು ಸೂಚಿಸಿದರು.

ಬೂಸ್ಟರ್ ಡೋಸೇಜ್ ಬಲವಾದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಆರಂಭಿಕ ಸೋಂಕು ಮತ್ತು ಪ್ರತಿರಕ್ಷಣೆ ಒಟ್ಟಾರೆಯಾಗಿ ಗಂಭೀರತೆಯನ್ನು ಕಡಿಮೆ ಮಾಡುತ್ತದೆ ಎಂದು ಡಾ ವಾಲಿ ತಿಳಿಸಿದ್ದಾರೆ.

ಸೋಂಕಿನ ವಿರುದ್ಧ ಹೋರಾಟದಲ್ಲಿ ರೋಗನಿರೋಧಕ ಕ್ರಮ ಮಹತ್ವದಾಗಿದೆ , ಸೋಂಕಿತ ವ್ಯಕ್ತಿಗಳನ್ನು ಮಾತ್ರ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ ಮತ್ತುಚಿಕಿತ್ಸೆ ನೀಡಬೇಕಾಗುತ್ತದೆ ಅವರನ್ನು ಆಸ್ಪತ್ರೆಗೆ ಕಳುಹಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತಕ್ಕೆ ಬಂದಿರುವ ಸೋಂಕಿತ ಚೀನಾ,ಆಸ್ಟ್ರೇಲಿಯಾ ಸೇರಿದಂತೆ ಮೂವರು ವಿದೇಶಿ ಪ್ರಯಾಣಿಕರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button