ಅಪರಾಧ

NCIB: Breaking News ಕೊಲೆ ಚಾಮರಾಜಪೇಟೆ MLA ಕಚೇರಿ ಬಳಿ ಹತ್ಯ ಹಣಕ್ಕಾಗಿ 77 ವರ್ಷದ ವೃದ್ಧನ ಕೊಲೆ..!

ಬೆಂಗಳೂರು : ಚಾಮರಾಜಪೇಟೆ MLA ಕಚೇರಿ ಬಳಿಯೇ ಮರ್ಡರ್​​​ ಆಗಿದ್ದು, ಹಾಡಹಗಲೇ ಭೀಕರ ಕೊಲೆ ನಡೆದಿದೆ. ಹಣಕ್ಕಾಗಿ 77 ವರ್ಷದ ವೃದ್ಧನ ಕೊಲೆ ಮಾಡಿದ್ದಾರೆ.ಹಾಡಹಗಲೇ ನಡೀತು ಭೀಕರ ಕೊಲೆ..! ಚಾಮರಾಜಪೇಟೆ MLA ಕಚೇರಿ ಬಳಿ ಹತ್ಯೆ..! ಹಣಕ್ಕಾಗಿ 77 ವರ್ಷದ ವೃದ್ಧನ ಕೊಲೆ..!May 25, 2022 ಹಾಡಹಗಲೇ ನಡೀತು ಭೀಕರ ಕೊಲೆ..! ಚಾಮರಾಜಪೇಟೆ MLA ಕಚೇರಿ ಬಳಿ ಹತ್ಯೆ..! ಹಣಕ್ಕಾಗಿ 77 ವರ್ಷದ ವೃದ್ಧನ ಕೊಲೆ..!ಬೆಂಗಳೂರು : ಚಾಮರಾಜಪೇಟೆ MLA ಕಚೇರಿ ಬಳಿಯೇ ಮರ್ಡರ್​​​ ಆಗಿದ್ದು, ಹಾಡಹಗಲೇ ಭೀಕರ ಕೊಲೆ ನಡೆದಿದೆ. ಹಣಕ್ಕಾಗಿ 77 ವರ್ಷದ ವೃದ್ಧನ ಕೊಲೆ ಮಾಡಿದ್ದಾರೆ.ಶಾಸಕ ಜಮೀರ್​ ಅಹ್ಮದ್ ಖಾನ್​​ ಕಚೇರಿ ಬಳಿ ಕೃತ್ಯ ನಡೆದಿದೆ. 77 ವರ್ಷದ ಜಿಗ್ಗುರಾಜ್ ​​ಎಂಬುವರ ಕಗ್ಗೊಲೆಯಾಗಿದೆ. ಈ ವೃದ್ಧ ಮಾರ್ಕೆಟ್​ನಲ್ಲಿ ಎಲೆಕ್ಟ್ರಿಕ್​​ ಅಂಗಡಿ ಇಟ್ಟಿದ್ದರು. ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಹತ್ಯೆ ನಡೆದಿದೆ. ಕೊಲೆ ಮಾಡಿರುವ ಹಂತಕರು ವೃದ್ಧನ ಕೈ-ಕಾಲು ಕಟ್ಟಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿದ್ದಾರೆ. ಈ ಪ್ರಕರಣ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾತನಾಡಿ ಜಿಗ್ಗುರಾಜ್ ಎಂಬುವರ ಕೊಲೆಯಾಗಿದ್ದು, ಮನೆ ಕೆಲಸದವ ಬಿಜೋರಾಮ್ ಎಂಬಾತನಿಂದ ಕೊಲೆಯಾಗಿದೆ. ಕೈಕಾಲು ಕಟ್ಟಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿರೋದಾಗಿ ಗೊತ್ತಾಗಿದೆ. ನಿನ್ನೆ ರಾತ್ರಿ ಕೊಲೆ‌ ಮಾಡಿ ಎಸ್ಕೇಪ್ ಆಗಿದ್ದಾನೆ.

ಕಳೆದ ಎಂಟು ತಿಂಗಳಿಂದ ಜಿಗ್ಗುರಾಜ್ ಮನೇಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಕೊಲೆ ಮಾಡಿ ಮನೇಲಿರೋ ಚಿನ್ನಾಭರಣ, ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ ಅವರ ಮೊಮ್ಮಗ ಬಂದು ಮನೆ ಓಪನ್ ಮಾಡಿದಾಗ ವಿಚಾರ ಗೊತ್ತಾಗಿದೆ. ಸದ್ಯ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button