Foodsಅಪರಾಧಆರೋಗ್ಯ

ಹುಟ್ಟುಹಬ್ಬದ ಹಳಸಿದ ಬಿರಿಯಾನಿ ಸೇವಿಸಿ 24 ಜನ ಅಸ್ವಸ್ಥ

ಹುಟ್ಟು ಹಬ್ಬದ ತಂಗಳು ಬಿರಿಯಾನಿ ತಿಂದು 24 ಜನ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಅರೇಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಂತೋಷ್ ಕುಮಾರ್ ಎಂಬುವವರ ಮನೆಯಲ್ಲಿ ನೆನ್ನೆ ಅವರ ಪುತ್ರನ ಹುಟ್ಟುಹಬ್ಬ ಕಾರ್ಯಕ್ರಮ ನೆರವೇರಿತ್ತು.

ಈ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಭರ್ಜರಿ ಬಿರಿಯಾನಿ ಊಟ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಉಳಿದ ಬಿರಿಯಾನಿಯನ್ನು ಸಂತೋಷ್ ಕುಮಾರ್ ತಮ್ಮ ತೊಟದ ಕೂಲಿ ಕಾಮಿಕರಿಗೆ ಕೊಟ್ಟಿದ್ದರು ಎನ್ನಲಾಗಿದೆ.

ಆದರೆ, ನಂತರ ತಂಗಳು ಅಥವಾ ಹಳಸಿದ ಬಿರಿಯಾನಿಯನ್ನು ಸೇವಿಸಿದ ಕೂಲಿಯಾಳುಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಂಗಳು ಬಿರಿಯಾನಿ ಸೇವಿಸಿದ ಸುಮಾರು 24 ಕೂಲಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.

ಹಳಸಿದ ಬಿರಿಯಾನಿ ಸೇವಿಸಿದ ಪುಟ್ಟ ಲಕ್ಷಮ್ಮ.ಮೇಘನಾ. ಲಾವಣ್ಯ.ಕಮಲ. ಯಶವಂತ್. ಸೇರಿದಂತೆ ಎಲ್ಲಾ 24 ಜನರನ್ನು ಹತ್ತಿರದ ಅಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಬಳಿಕ ಶಾಸಕ ಮಹೇಶ್ ಕೂಡಲೇ ಆಸ್ಪತ್ರೆಗೆ ಧಾವಿಸಿ ಅಸ್ವಸ್ಥರಾಗಿರುವ ಕೂಲಿ ಕಾರ್ಮಿಕರ ವಿಚಾರಣೆ ನಡೆಸಿದ್ದಾರೆ ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button