
ಭಾರತದ ಕಥೋಲಿಕ ಕ್ರೈಸ್ತರು ಆಚರಿಸುವ ಹಬ್ಬಗಳಲ್ಲಿ ಸಕಲ ಆತ್ಮಗಳ ಹಬ್ಬ ಅಥವಾ ಸಮಾಧಿಗಳ ಹಬ್ಬವೆಂದು ಪ್ರತಿ ವರ್ಷ ನವೆಂಬರ್ ಎರಡರಂದು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ.
ಬನ್ನಿ ಈ ಹಬ್ಬದ ಮಹತ್ವವನ್ನು ತಿಳಿಯೋಣ.
ಸಾಮಾನ್ಯವಾಗಿ ನಮ್ಮನ್ನಗಲಿರುವ ನಮ್ಮವರು, ಸತ್ತ ನಂತರ ನಮ್ಮಿಂದ ದೂರ ಉಳಿದಿರುವ ಆತ್ಮಗಳು, ಮತ್ತೆ ಹುಟ್ಟಿಬರುತ್ತಾರೆ ಎನ್ನುವ ನಂಬಿಕೆ ಇದೆ.
ಮತ್ತೆ ಹುಟ್ಟದಿದ್ದರು ನಾವು ಅವರನ್ನು ಸೇರುತ್ತೇವೆ ಎನ್ನುವ ವಿಶ್ವಾಸ ಮಾತ್ರ ಇನ್ನು ಉಳಿದಿದೆ. ಹೀಗೆ ಅಗಲಿದವರ ಆತ್ಮಗಳನ್ನು ಪೂಜಿಸುವ ವಿಶೇಷ ಆಚರಣೆಯೊಂದು ಮಾಡುತ್ತಾರೆ .ಅದುವೇ ಸಮಾಧಿಗಳ ಹಬ್ಬ ಅಥವಾ ಆಲ್ ಸೋಲ್ಸ್ ಡೇ . ಈ ದಿನದ ವಿಶೇಷದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸಮಾಧಿ ಹಬ್ಬ : ಸತ್ತಾಗ ಸಮಾಧಿಗೆ ಹೂವಿನ ಅಲಂಕಾರ ಮಾಡುವುದು ಸಹಜ. ಜೊತೆಗೆ ಮಹಾಲಯ ಅಮಾವಾಸ್ಯೆ ದಿನ ಮೃತರ ಸಮಾಧಿಗೆ ಪೂಜೆ ಮಾಡಿ ಬರುವುದು ಹಿಂದೂ ಸಂಪ್ರದಾಯ ಹಾಗೂ ನಂಬಿಕೆ.
ಆದರೆ ಇಡೀ ಸ್ಮಶಾನಕ್ಕೆ ಅಲಂಕಾರ ಮಾಡಿ, ಸಮಾಧಿಗಳನ್ನು ಸಿಂಗಾರ ಮಾಡಿ ಪೂಜೆ ಮಾಡುವ ವಿಶಿಷ್ಟ ಸಂಪ್ರಯದಾಯ ಕೂಡ ಇದೆ.ಅದು ಕ್ರೈಸ್ತ ಧರ್ಮದಲ್ಲಿ ಒಂದು ವಾಡಿಕೆಯಾಗಿದೆ.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸಮಾಧಿ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಹಿರಿಯರು, ತಂದೆ, ತಾಯಿ, ಸೋದರ, ಸೋದರಿಯರು ಹೀಗೆ ನಮ್ಮನ್ನಗಲಿದ ರಕ್ತ ಸಂಬಂಧಿಗಳ ಆತ್ಮಗಳಿಗೆ ಪೂಜೆ ಮಾಡುವ ಈ ದಿನವನ್ನು ಸಕಲ ಆತ್ಮಗಳ ದಿನ ಎಂದು ಪ್ರಮುಖವಾಗಿ ಆಚರಣೆ ಮಾಡೋದು ಕ್ರಿಶ್ಚಿಯನ್ ಸಮುದಾಯ.
ಕ್ರಿಶ್ಚಿಯನ್ ಧರ್ಮದಲ್ಲಿ ಸ್ಮಶಾನಗಳಲ್ಲಿ ತಮ್ಮ ಕುಟುಂಬಗಳಲ್ಲಿ ಮೃತರಾದವರನ್ನು ಒಂದೇ ಸಮಾಧಿಗಳಲ್ಲಿ ಹಾಕಿ ಅಂತ್ಯಸಂಸ್ಕಾರ ಮಾಡೋದು ಪದ್ದತಿ.
ಒಂದು ತಲೆ ಮಾರಿನ ಜನರಿಗೆ ಒಂದರಂತೆ ಸಮಾಧಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅವರು ಸತ್ತಾಗ ಅವರನ್ನು ಅದೇ ಸಮಾಧಿಗಳಲ್ಲಿ ಹಾಕಲಾಗುತ್ತದೆ,
ಹೀಗೆ ಮಾಡಿ ಪ್ರತಿ ವರ್ಷ ಅವರ ಆತ್ಮಗಳಿಗೆ ಪೂಜೆ ಮಾಡುವ ಸಲುವಾಗಿ ಸ್ಮಶಾನ ಹಬ್ಬ ಎಂದು ಆಚರಣೆ ಮಾಡುತ್ತಾರೆ ಎಂದು ಫಾದರ್ ಹೇಳಿದ್ದಾರೆ.
ಸತ್ತವರು ಮತ್ತೆ ಹುಟ್ಟಿ ಬರುತ್ತಾರೆ ಎನ್ನುವ ನಂಬಿಕೆ ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲಿ ಇರುವಂತೆ ಸತ್ತವರು ಮತ್ತೆ ಜೀವಕ್ಕೆ ಎಬ್ಬಿಸಲ್ಪಡುತ್ತಾರೆ ಎನ್ನುವ ನಂಬಿಕೆಯನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಬಲವಾಗಿ ನಂಬಲಾಗುತ್ತದೆ.
ಈ ಸಲುವಾಗಿ ಸಮಾಧಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಹಾಗೆ ಮೃತರ ಆತ್ಮಗಳಿಗೆ ಪೂಜೆ ಸಲ್ಲಿಸಿ, ಬಲಿಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ.
ಈ ದಿನದಂದು ಕುಟುಂಬದ ಎಲ್ಲಾ ಸದಸ್ಯರು ಒಂದೆಡೆ ಸೇರಿ ಸಮಾಧಿಗಳಿಗೆ ಬಗೆ ಬಗೆಯಾಗಿ ಅಲಂಕಾರ ಮಾಡಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾರೆ.
ಇನ್ನು ಸಮಾಧಿ ಹಬ್ಬವನ್ನು ಇಲ್ಲಿ ಬಹಳ ಪ್ರಾಮುಖ್ಯತೆ ಹಾಗೂ ಅತೀವ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಈ ದಿನದಂದು ಕುಟುಂಬಕ್ಕೆ ಸೇರಿದ ಎಲ್ಲರೂ ಕಡ್ಡಾಯವಾಗಿ ಇಲ್ಲಿಗೆ ಬಂದು ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ.
ಎಷ್ಟೇ ದೂರದ ಊರುಗಳಲ್ಲಿ ಅಥವಾ ಯಾವುದೇ ದೇಶಗಳಲ್ಲಿ ಇರಲಿ ಕಡ್ಡಾಯವಾಗಿ ಬಂದೇ ಬರುತ್ತಾರೆ. ಎಷ್ಟೋ ಬಾರಿ ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಕೂಡಾ ಈ ದಿನಗಳಲ್ಲಿ ಸ್ಮಶಾನ ಪೂಜೆಗೆ ಬರುತ್ತಾರೆ.
ಎಂದು ಕಾದು ಕುಳಿತು ಅವರನ್ನು ಬಂಧಿಸಿರುವ ಉದಾಹರಣೆಗಳು ಇವೆ.ಒಟ್ಟಾರೆ ಮನುಷ್ಯ ಸತ್ತ ಮೇಲೆ ಅವನ ಆತ್ಮ ಸಾಯುವುದಿಲ್ಲ ಎನ್ನುವ ಮಾತಿದೆ.
ಸಾವು ಪ್ರತಿಯೊಬ್ಬರಿಗೂ ಬರುತ್ತೆ ಸತ್ತವರನ್ನು ನೆನದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
ಓ ಕರ್ತರೇ ಮೃತರಿಗೆ ನಿತ್ಯ ವಿಶ್ರಾಂತಿಯನ್ನು ದಯಪಾಲಿಸಲಿ. ನಿತ್ಯ ಜ್ಯೋತಿಯು ಅವರ ಮೇಲೆ ಪ್ರಕಾಶಿಸಲಿ ಆಮೆನ್.
ಮಣ್ಣು ನೀನು ಮೆರೆಯ ಬೇಡಾ ಮನುಜ. ಮಣ್ಣಾಗಿ ಹೋಗುವೆ ಮರೆಯದಿರು.
ವರದಿ : ಆಂಟೋನಿ ಬೇಗೂರು