ಆರೋಗ್ಯಬೆಂಗಳೂರುರಾಜ್ಯರಾಷ್ಟ್ರಿಯ

ಸಂಧಿವಾತ ಸಮಸ್ಯೆ ಇದ್ದರೆ, ದಿನಾ ಬಾಳೆಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಿ!

ನೈಸರ್ಗಿಕವಾಗಿ ಸಿಗುವ ಪ್ರತಿಯೊಂದು ಹಣ್ಣುಗಳು ಕೂಡ ಅಷ್ಟೇ, ಮನುಷ್ಯನ ಆರೋಗ್ಯಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ತಂದು ಕೊಡುತ್ತದೆ.

ಹೀಗಾಗಿ ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಕೂಡ ಬಳಸಿಕೊಂಡರೆ, ಹಲವಾರು ಕಾಯಿಲೆಗಳಿಂದ ದೂರ ಇರಲು ನೆರವಾಗುತ್ತದೆ.

ಉದಾಹರಣೆಗೆ ಹೇಳಬೇಕೆಂದರೆ ಬಾಳೆಹಣ್ಣು. ವರ್ಷ ಪೂರ್ತಿ ಸಿಗುವ ಈ ಹಣ್ಣನ್ನು ಬಡವರ ಹಣ್ಣು ಎಂದರೂ ಕೂಡ ತಪ್ಪಾಗಲಾರದು.

ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಪ್ರಮುಖವಾಗಿ ಈ ಹಣ್ಣಿನಲ್ಲಿ ಕಂಡು ಬರುವ ಪೌಷ್ಠಿಕಾಂಶಗಳು ಹಾಗೂ ವಿಟಮಿನ್ಸ್‌ಗಳು ದೇಹದ ಆರೋಗ್ಯ ವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಬನ್ನಿ ಇಂದಿನ ಲೇಖನದಲ್ಲಿ ಬಾಳೆಹಣ್ಣು ಸೇವನೆ ಮಾಡುವುದ ರಿಂದ, ದೇಹದ ಮೂಳೆಗಳು ಹೇಗೆ ಗಟ್ಟಿಮುಟ್ಟುಗೊಳ್ಳುತ್ತದೆ ಎನ್ನುವುದನ್ನು ನೋಡೋಣ…

ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಹೀಗಾಗಿ ಈ ಸಮಸ್ಯೆ ಇರುವವರು ಪ್ರತಿದಿನ ಒಂದೊಂದ ಬಾಳೆಹಣ್ಣು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು..

ಬಾಳೆಹಣ್ಣಿನಲ್ಲಿ ಸಿಗುವ ಪೋಷಕಾಂಶಗಳ ವಿಚಾರದ ಬಗ್ಗೆ ಹೇಳುವುದಾದರೆ, ಈ ಹಣ್ಣಿನಲ್ಲಿ ಸೇಬಿ ಗಿಂತಲೂ ಹೆಚ್ಚಿನ ಪೋಷಕಾಂಶಗಳು ಅಡಗಿದೆ, ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.

ಇನ್ನು ಬಾಳೆಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ ಎ, ಕಡಿಮೆ ಪ್ರಮಾಣದ ಕಾರ್ಬೋ ಹೈಡ್ರೇಟ್ಸ್, ಕ್ಯಾಲ್ಸಿಯಂ, ಮೆಗ್ನಿಶಿಯಂ ಹಾಗೂ ಕಬ್ಬಿನಾಂಶವು ಕಂಡು ಬರುವುದರಿಂದ ಪ್ರತಿದಿನ ಒಂದೆರಡು ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡರೆ, ಅಪಾರ ಪ್ರಮಾಣದ ಆರೋಗ್ಯ ಪ್ರಯೋಜನಗಳು ನಮ್ಮದಾಗುತ್ತದೆ.

ಸಂಧಿವಾತ ಎನ್ನುವುದು ಮೂಳೆಗಳಿಗೆ ಸಂಬಂಧಪಟ್ಟ ಕಾಯಿಲೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಈ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ಪ್ರಮುಖವಾಗಿ ವಿಟಮಿನ್ ಡಿ3 ವಿಟಮಿನ್ B12 ಹಾಗೂ ಕ್ಯಾಲ್ಸಿಯಂ ಅಂಶಗಳು ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಇನ್ನು ಈಗಾಗಲೇ ಸಂಧಿವಾತ ಸಮಸ್ಯೆ ಇದ್ದವರು, ಪ್ರತಿದಿನ ಒಂದೊಂದು ಬಾಳೆಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು.

ಇನ್ನು ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ, ದೇಹದ ಮೂಳೆಗಳ ಆರೋಗ್ಯವನ್ನುಕಾಪಾಡುವುದು, ಅಲ್ಲದೆ ಕೀಲುಗಳಲ್ಲಿ ಸವೆತ ಕಂಡು ಬರದೇ ಇರುವ ಹಾಗೆ ನೋಡಿಕೊಳ್ಳುವುದು.

ಇದರ ಜೊತೆಗೆ ಈ ಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶಗಳು ಕೂಡ ಕಂಡು ಬರುವುದರಿಂದ ಮೂಳೆಗಳು ತೆಳುವಾಗುವುದನ್ನು ಕೂಡ ತಡೆಯಬಹುದು.

ಈ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆದಿದ್ದು, ಮನುಷ್ಯನ ಆರೋಗ್ಯದಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಪೊಟ್ಯಾಶಿಯಂ ಅಂಶ ಶೇಖರಣೆ ಆಗುತ್ತಾ ಹೋದ ಹಾಗೆ,

ಅವರಲ್ಲಿ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕೀಲುಗಳಲ್ಲಿ ಸವೆತ ಕಂಡು ಬರುವ ಸಮಸ್ಯೆ, ತುಂಬಾನೇ ಕಡಿಮೆ ಇರುತ್ತದೆ ಎಂದು, ಅಧ್ಯಾಯನಕಾರರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಸಂಧಿವಾತ ಸಮಸ್ಯೆ, ಇರುವವರು ಕಟ್ಟುನಿಟ್ಟನ ಆಹಾರಪದ್ಧತಿ ಹಾಗೂ ಮೆನಮದ್ದುಗಳನ್ನು ಅನುಸರಿಸು ವುದರ ಜೊತೆಗೆ ವೈದ್ಯರು ನೀಡಿರುವ ಔಷಧಿಗಳನ್ನು ಸಹ ತೆಗೆದುಕೊಳ್ಳಬೇಕು.

ಒಂದು ವೇಳೆ, ಹಲವಾರು ವರ್ಷಗಳಿಂದ, ನೀವು ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆಯನ್ನು ಎದುರಿಸು ತ್ತಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

ಸಾಧ್ಯವಾದ್ರೆ ಆಹಾರಕ್ರಮದಲ್ಲಿ ತುಪ್ಪದ ಬಳಕೆಯನ್ನು ಮಾಡಿ. ಪ್ರತಿದಿನ ಬಾದಾಮಿ ಗೋಡಂಬಿ ಪಿಸ್ತಾ, ವಾಲ್ನಟ್, ಒಣ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button