Accident

ಲೋಕಾಪುರ ಬಳಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ; ಟ್ಯಾಂಕರ್ ಜತೆ ರಸ್ತೆ ಪಕ್ಕದ ಅಂಗಡಿಗಳು, ಮರಗಳು ಭಸ್ಮ

ಬಾಗಲಕೋಟೆ: ಜಿಲ್ಲೆಯ ಲೋಕಾಪುರದಿಂದ ಮುಧೋಳಕ್ಕೆ ಹೋಗುವ ರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರೊಂದು ಉರುಳಿ ಬಿದಿದ್ದು, ಅದರಿಂದ ಟ್ಯಾಂಕರ್ ಗೆ ಬೆಂಕಿ ಹೊತ್ತಿಕೊಡು ಇಡೀ ಟ್ಯಾಂಕರ್ ಸುಟ್ಟು ಭಸ್ಮವಾಗಿದೆ. ಬೆಂಕಿಯ ದಳ್ಳುರಿಗೆ ರಸ್ತೆ ಪಕ್ಕದಲ್ಲಿದ್ದ ಎರಡು ಅಂಗಡಿಗಳೂ ಸುಟ್ಟು ಹೋಗಿವೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ. ರಸ್ತೆಯ ಪಕ್ಕದಲ್ಲಿರುವ ಅಂಗಡಿ ಮಾಲಿಕರಾದ ಮಂಜು ಅವರು ಅಂಗಡಿಯಲ್ಲಿ ಕಲಸ ಮಾಡುತ್ತಿದ್ದರು. ಟ್ಯಾಂಕರ್ ಉರುಳಿದ್ದನ್ನು ನೋಡಿ ಹೋರಗೆ ಬಂದು ಓಡಿ ಹೋಗಿದ್ದರಿಂದ ಅವರು ಬಚಾವಾಗಿದ್ದಾರೆ.ಹೆದ್ದಾರಿಯಲ್ಲಿ ಬೆಂಕಿ ವ್ಯಾಪಿಸಿರುವುದರಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಯಿಂದ ಡೀಸೆಲ್ ವಾಹನ ಹಾಗೂ ಅಂಗಡಿಗಳ ಬೆಂಕಿಯನ್ನು ನಂದಿಸಿದ್ದಾರೆ. ಮೊದಲಿಗೆ ಎರಡು ಅಗ್ನಿಶಾಮಕ ಟ್ಯಾಂಕರ್ ಗಳು ಬಂದಿದ್ದವು. ಆದರೆ, ಬೆಂಕಿಯ ತೀಕ್ಷ್ಣತೆ ಹೆಚ್ಚಾಗಿದ್ದಿದ್ದನ್ನು ಗಮನಿಸಿ ಮತ್ತೊಂದು ಅಗ್ನಿಶಾಮಕ ವಾಹನವನ್ನು ತರಿಸಲಾಯಿತು.

ಹೆದ್ದಾರಿ ಬಂದ್ ಆಗಿರುವುದರಿಂದ ಮುಧೋಳ ಹಾಗೂ ಲೋಕಾಪುರಕ್ಕೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೆಲವರು ಹೆದ್ದಾರಿಯಲ್ಲೇ ನಿಲುಗಡೆಯಾಗಿರುವ ಬಸ್ ಗಳಿಂದ ಇಳಿದು ತಾವು ಹೋಗಬೇಕಾದ ಕಡೆಗೆ ಕಾಲ್ನಡಿಗೆಯಲ್ಲೇ ನಡೆದು ಹೋಗಲಾರಂಭಿಸಿದ್ದಾರೆ.

ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆಯಿಂದಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button