ರಾಜ್ಯ

ರಾಮನಗರದಲ್ಲಿ ಇಂದಿನಿಂದ ಆಪರೇಷನ್ ಪುಂಡಾನೆ ಶುರು; 5 ಸಾಕಾನೆಗಳ ಮುಖಾಂತರ ಕಾರ್ಯಾಚರಣೆ!

ರಾಮನಗರ: ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹಿನ್ನೆಲೆಯಲ್ಲಿ ಎರಡು ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. 5 ಸಾಕಾನೆಗಳ ಮುಖಾಂತರ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿಗಳು ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಂದೂವರೆ ವರ್ಷದಿಂದ ಚನ್ನಪಟ್ಟಣ ಭಾಗದಲ್ಲಿ ಈ ಎರಡು ಪುಂಡಾನೆಗಳ ಉಪಟಳಕ್ಕೆ ಸಾವಿರಾರು ಎಕರೆ ಫಸಲಿನ ಪ್ರದೇಶ ನೆಲಸಮಗೊಂಡಿದೆ. ಕಳೆದ ವರ್ಷ 6 ಮಂದಿ ಮೃತಪಟ್ಟಿದ್ದಾರೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಒತ್ತಾಯದಿಂದಾಗಿ ಈ ಗಂಡಾನೆಗಳ ನಡಿಗೆ ಪತ್ತೆ ಮಾಡಿ, ಅರಣ್ಯ ಇಲಾಖೆ ಕಾರ್‍ಯಾಚರಣೆ ನಡೆಸಿ ಹಿಡಿಯಲು ಮುಂದಾಗಿದೆ.

ಮಹಾರಾಷ್ಟ್ರ ಭೀಮ, ಗಣೇಶ, ಹರ್ಷ, ಲಕ್ಷ್ಮಣ, ಪ್ರಶಾಂತ ಆನೆಗಳ ಮುಖಾಂತರ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಾನೆಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿದೆ.

ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ 24 ಕಾಡಾನೆಗಳಿವೆ ಎಂದು ಅಂದಾಜಿಸಲಾಗಿದೆ. ಆ ಪೈಕಿ 14 ಆನೆಗಳು ಕಬ್ಬಾಳು, 7ರಿಂದ 8 ಆನೆಗಳ ಗುಂಪು ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿವೆ. ಆದರೆ, ಗುಂಪಿನಿಂದ ದೂರ ಉಳಿದ 2 ಒಂಟಿ ಸಲಗಗಳ ಶೋಧ ಕಾರ್ಯಕ್ಕೆ ಹಾಗೂ ಸೆರೆ ಹಿಡಿದು ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಸೆರೆ ಹಿಡಿಯುವುದು ಹೇಗೆ?ಮೊದಲು ಹಿಂಡಿನಿಂದ ಬೇರ್ಪಟ್ಟಿರುವ ಆನೆಗಳಿರುವ ಜಾಗ ಪತ್ತೆ ಮಾಡಲಾಗುತ್ತದೆ. ಬಳಿಕ ಬೆಟ್ಟದ ಪ್ರದೇಶದಲ್ಲಿರುವ ಆನೆಗಳನ್ನು ಸಮತಟ್ಟಿನ ಪ್ರದೇಶಕ್ಕೆ ಕರೆತಂದು ಅರಿವಳಿಕೆ ಲಸಿಕೆ ನೀಡಲಾಗುತ್ತದೆ. ಕೆಲ ಸಮಯದ ನಂತರ ಅರವಳಿಕೆಯಿಂದ ಎಚ್ಚರಗೊಳಿಸುವ ಇಂಜೆಕ್ಷನ್‌ ನೀಡಿ, ಪಳಗಿರುವ ಆನೆಗಳ ಸಹಾಯದಿಂದ ಲಾರಿ ಹತ್ತಿಸಿ, ಮಹದೇಶ್ವರ ಬೆಟ್ಟದ ಅರಣ್ಯಕ್ಕೆ ಸಾಗಿಸಬೇಕು. ಒಂದು ವೇಳೆ ಈ ಕಾರ್ಯಾಚರಣೆ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ, ಆನೆಗಳು ಮೃತ ಪಡುವ ಅಪಾಯ ಇದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button