ಅಪರಾಧಬೆಂಗಳೂರುರಾಜ್ಯ

ಮದುವೆ ನಿರಾಕರಿಸಿದ್ದಕ್ಕೆ ಪ್ರೀತಿಸಿದ ಹುಡುಗಿ ಮನೆ ಮುಂದೆ ವೀಡಿಯೊ ಮಾಡಿ ಪ್ರೇಮಿ ಆತ್ಮಹತ್ಯೆ

ಹುಡುಗಿಯ ಮನೆಯಲ್ಲಿ ತಮ್ಮ ಮದುವೆಗೆ ಒಪ್ಪಲಿಲ್ಲ ಎಂದು ಮನನೊಂದ ಭಗ್ನಪ್ರೇಮಿಯೊಬ್ಬ ಯುವತಿಯ ಮನೆಯ ಸಮೀಪವೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.

ದೊಡ್ಡಸೋಮನಹಳ್ಳಿ ಗ್ರಾಮದ ಮೋಹನ್ ಕುಮಾರ್ (29) ಆತ್ಮಹತ್ಯೆ ಮಾಡಿಕೊಂಡವ.ಹುಡುಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಗ್ರಾಮದ ಪಕ್ಕದ ಯುವತಿ ಕಾವ್ಯಾಳನ್ನು ಪ್ರೀತಿಸುತ್ತಿದ್ದ.

ಎರಡೂ ಕುಟುಂಬದವರು ಮದುವೆ ಮಾಡಲು ಒಪ್ಪಿದ್ದರು.ಇದಕ್ಕಿದ್ದಂತೆ ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಮನವೊಂದ ಆ ಯುವಕ ಯುವತಿಯ ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುತ್ತಿದ್ದಾರೆ.ಕಾವ್ಯಾಳ ಕುಟುಂಬಕ್ಕೆ ಏಳು ಲಕ್ಷ ಹಣದ ನೆರವು ಕೂಡ ಮೋಹನ್ ನೀಡಿದ್ದ ಎನ್ನಲಾಗಿದೆ.

ಮದುವೆಯಾಗಲು ಕಾವ್ಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು, ವೀಡಿಯೊ ಮಾಡುತ್ತಾ ಮರಕ್ಕೆ ನೇಣು ಬಿಗಿದುಕೊಂಡು ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಜಯಲಕ್ಷಮ್ಮ ಹೇಳಿದ್ದಾರೆ.

ಮತ್ತೊಬ್ಬ ಯುವಕ ಹೆಚ್ಚಿನ ಹಣ ಕೊಟ್ಟು ಮದುವೆಯಾಗಲು ಒಪ್ಪಿದಾಗ ಕಾವ್ಯಾ ಮೋಹನನನ್ನು ನಿರಾಕರಿಸಿದ್ದಾಳು ಎನ್ನಲಾಗಿದೆ.

ಮೋಹನ್ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಜಯರಾಮು, ಮಾರೇಗೌಡ, ಕಾವ್ಯಾಳ ತಾಯಿ ವರಲಕ್ಷಿ, ರಾಜು ಕಾರಣವೆಂದು ಬರೆದಿದ್ದಾನೆ.ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವರಲಕ್ಷಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರು ತಲೆ ಮರೆಸಿಕೊಂಡಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button