Uncategorized

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ತಾಯಿ-ಮಗು ಸೇರಿ ಮೂವರ ದುರ್ಮರಣ

ರಾಮನಗರ: ಹಲಗೂರು-ಕನಕಪುರ ಮುಖ್ಯ ರಸ್ತೆಯ ಸಾತನೂರಿನ ಕೆಮ್ಮಲ್ಲಿ ದೊಡ್ಡಿ ಗ್ರಾಮದ ಬಳಿ KSRTC ಬಸ್ ಮತ್ತು ಇನೋವಾ ಕಾರಿನ ನಡುವೆ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.ಉಡುಪಿ ಮೂಲದ ಅಕ್ಷತಾ, ಇವರ 6 ತಿಂಗಳು ಮಗು ಸುಮಂತ್ ಮತ್ತು ಡ್ರೈವರ್ ಉಮೇಶ್ ಮೃತ ದುರ್ದೈವಿಗಳು. ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಗು ಸುಮಂತ ಮುಖದ ಒಂದು ಭಾಗ ಬೇರ್ಪಟ್ಟಿದ್ದು, ರಸ್ತೆಯಲ್ಲೇ ಅಕ್ಷತಾ ಮ ಮಗುವಿನ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಡ್ರೈವರ್ ಕಾರಿನ ಮೃತಪಟ್ಟಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button