
ಬೆಂಗಳೂರಿನ ಆಡಳಿತ ಕೇಂದ್ರ ಬಿಂದು ಬಿಬಿಎಂಪಿಗೆ ಸಂಬಂಧಿಸಿದಂತೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತಯಾರಿ ಆರಂಭಿಸಿದ್ದು, ಶೀಘ್ರದಲ್ಲೇ ದಿನಾಂಕ ಘೋಷಣೆ ಆಗಲಿದೆ.
ಈ ಸಂಬಂಧ ಆ.೨೦ರಂದು ಮಹತ್ವದ ಸಭೆ ನಡೆಸಲಿರುವ ಚುನಾವಣಾ ಆಯೋಗ, ಪೂರ್ವ ಭಾವಿ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಹಲವು ಸೂಚನೆ ಮತ್ತು ಮಾರ್ಗದರ್ಶನ ನೀಡಲಿದೆ.
ಪ್ರಮುಖವಾಗಿ ಕರಡು ಮತದಾರರ ಪಟ್ಟಿ, ಆನ್ ಲೈನ್ ನಲ್ಲಿ ಮತದಾರರಿಗೆ ಸುಲಭ ರೀತಿಯಲ್ಲಿ ಮಾಹಿತಿ, ಮತಗಟ್ಟೆ ಅದರಲ್ಲೂ ಸೂಕ್ಷ್ಮ ಮತಗಳ ಪರಿಶೀಲನೆ, ಸಿಬ್ಬಂದಿ ನಿಯೋಜನೆ.
ಮತದಾನ, ಏಣಿಕೆ ದಿನದಂದು ನಡೆಯುವ ಪ್ರಕ್ರಿಯೆ ಸಂದರ್ಭದಲ್ಲಿ ಅಗತ್ಯ ನೌಕರರ ನಿಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಲು ಸಭೆ ನಡೆಸಲಾಗುತ್ತಿದೆ ಎಂದು ಆಯೋಗ ಹೇಳಿದೆ.
ಇನ್ನೂ, ಈ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ವಾರ್ತಾ ಇಲಾಖೆ ಆಯುಕ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಎಲ್ಲಾ ವಲಯಗಳ ಜಂಟಿ ಆಯುಕ್ತರು ಭಾಗಿಯಾಗಲಿದ್ದಾರೆ.೨೦೨೦ರ ಸೆ.೧೦ರಂದು ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಅವಧಿ ಅಂತ್ಯಗೊಂಡಿತ್ತು.
ಹಳೆಯ ೧೯೮ ವಾರ್ಡ್ಗಳಿಗೆ ಚುನಾವಣೆ ನಡೆಸಬೇಕೋ ಅಥವಾ ೨೦೨೦ರ ಕಾಯಿದೆಯಂತೆ ೨೪೩ ವಾರ್ಡ್ಗಳಿಗೆ ಚುನಾವಣೆ ನಡೆಸಬೇಕೋ ಎಂಬ ವಿವಾದ ಸುಪ್ರೀಂಕೋರ್ಟ್ಗೂ ಹೋಗಿತ್ತು. ಸದ್ಯ ಈ ವ್ಯಾಜ್ಯದ ವಿಚಾರಣೆ ಮುಕ್ತಾಯಗೊಂಡು ತೀರ್ಪು ಹೊರಬಿದ್ದೆ.
ಒಟ್ಟಿನಲ್ಲಿ ಬಿಬಿಎಂಪಿ ಚುನಾವಣೆಗೆ ಹಲವಾರು ಅಡ್ಡಿ ಆತಂಕದ ನಡುವೆಯು ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ನ್ಯಾಯಾಲಯ ಮಧ್ಯ ಪ್ರವೇಶ ಮಾಡಿದ್ದರೇ ಕೆಲವೇ ತಿಂಗಳಲ್ಲಿ ಚುನಾವಣೆ ಬಹುತೇಕ ಖಚಿತವಾಗಲಿದೆ.