ಅಪರಾಧ

ಪೊಲೀಸರಿಂದ ತಪ್ಪಿಸಿಕೊಂಡು ಮೂಸೆವಾಲ ಹತ್ಯೆಯ ಮಾಸ್ಟರ್ ಮೈಂಡ್ ಎಸ್ಕೇಪ್

ಪಂಜಾಬ್‍ನ ರಾಜಕಾರಣಿ ಹಾಗೂ ಗಾಯಕ ಸಿದ್ದು ಮೂಸೆವಾಲ ಹತ್ಯೆಯ ಮಾಸ್ಟರ್ ಮೈಂಡ್ ದೀಪಕ್ ಅಲಿಯಾಸ್ ಟೀನು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಸಿದ್ದು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಕಿಂಗ್‍ಪಿನ್ ಆಗಿರುವ ಲಾರೆನ್ಸ್ ಬಿಷ್ಣೋಯಿ ಪರಮಾಪ್ತನಾಗಿರುವ ದೀಪಕ್ ಮೇ 29ರಂದು ನಡೆದ ಕೃತ್ಯದ ಸಂಚು ರೂಪಿಸಿದ್ದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗಿದೆ.15 ಜನ ಹತ್ಯೆ ಆರೋಪಿಗಳಲ್ಲಿ ಈತ ಪ್ರಮುಖನಾಗಿದ್ದ.

ದೆಹಲಿ ಪೊಲೀಸರು ಬಾಡಿ ವಾರೆಂಟ್ ಮೇಲೆ ದೀಪಕ್‍ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಂಜಾಬ್‍ನಿಂದ ಕರೆತರುತ್ತಿದ್ದರು. ಕೇಂದ್ರ ತನಿಖಾ ಸಂಸ್ಥೆ(ಸಿಐಎ) ಸಿಬ್ಬಂದಿಗಳ ಭದ್ರತೆಯಲ್ಲಿ ಶನಿವಾರ ಮಧ್ಯರಾತ್ರಿ 11 ಗಂಟೆಗೆ ಆರೋಪಿಯನ್ನು ಮಾನಸ ಕಪುರ್ತಲ ಜೈಲಿನಿಂದ ಕರೆತರುವಾಗ ಈತ ತಪ್ಪಿಸಿಕೊಂಡಿದ್ದಾನೆ.

ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾಗುವುದರಲ್ಲಿ ಈತ ಎತ್ತಿದಕೈ ಆಗಿದ್ದು ಈಗ 4ನೇ ಬಾರಿ ತಪ್ಪಿಸಿಕೊಂಡಿದ್ದಾನೆ. ಈ ಮೊದಲು 2017ರಲ್ಲಿ ಅಂಬಾಲ ಸೆಂಟ್ರಲ್ ಜೈಲಿನಲ್ಲಿದ್ದ ಆರೋಪಿ ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋಗುವಾಗ ಪೊಲೀಸ್ ಸಿಬ್ಬಂದಿಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಒಡೆದು ತಪ್ಪಿಸಿಕೊಂಡಿದ್ದ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button