ಅಪರಾಧ

ಪೂಜೆಯ ನೆಪದಲ್ಲಿ ಮಹಿಳೆಗೆ ವಂಚಿಸಿದ್ದ ಜ್ಯೋತಿಷಿಯನ್ನು ಸೆರೆಮನೆಗೆ ತಳ್ಳಿದ ಪೊಲೀಸರು

ಚಿಕ್ಕಮಗಳೂರು: ಸಮಸ್ಯೆ ಪರಿಹಾರಕ್ಕೆ ಪೂಜೆ ಮಾಡುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ವಂಚಿಸಿದ ಜ್ಯೋತಿಷಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಯಶಸ್ವಿಯಾಗಿದೆ.ಬೆಂಗಳೂರಿನ ಸಹಕಾರ ನಗರದ ಗಣೇಶ್‌ ಗೊಂದಳೆ (27) ಬಂಧಿತ ಜ್ಯೋತಿಷಿ.

ಸಮಸ್ಯೆಗಳನ್ನು ಪರಿಹರಿಸುವುದಾಗಿ ಜಾಲತಾಣದಲ್ಲಿ ಜ್ಯೋತಿಷಿ ಗಣೇಶ್‌ ಗೊಂದಳೆ ಜಾಹೀರಾತು ನೀಡಿದ್ದ. ಇದನ್ನು ನಂಬಿದ ಮಹಿಳೆಯೊಬ್ಬರು ಜಾಹೀರಾತಿನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕೌಟುಂಬಿಕ ಸಮಸ್ಯೆ ಪರಿಹರಿಸುವಂತೆ ಜ್ಯೋತಿಷಿಯನ್ನು ವಿನಂತಿಸಿದ್ದರು.

ಇದನ್ನೇ ಬಂಡವಾಳ ಮಾಡಿಕೊಂಡ ಜ್ಯೋತಿಷಿ ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಪೂಜೆ ಮಾಡಬೇಕಿದ್ದು, 7 ಸಾವಿರ ರೂ. ಖಚ್ಚಾಗುತ್ತದೆ ಎಂದು ತಿಳಿಸಿದ್ದ. ನಂಬಿದ ಮಹಿಳೆ ಗೂಗಲ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ಜ್ಯೋತಿಷಿ ಬೇರೆ ಬೇರೆ ಪೂಜೆಗಳನ್ನು ಮಾಡಿದರೆ ಸಮಸ್ಯೆ ಪೂರ್ಣ ಪರಿಹಾರವಾಗುತ್ತದೆ ಎಂದು ಮಹಿಳೆಗೆ ತಿಳಿಸಿ 1 ಲಕ್ಷ 16 ಸಾವಿರ ರೂ. ವರ್ಗಾವಣೆ ಮಾಡುವಂತೆ ಬೇಡಿಕೆ ಮುಂದಿಟ್ಟಿದ್ದ. ಅನುಮಾನಗೊಂಡ ಮಹಿಳೆ ಜಿಲ್ಲಾ ಪೊಲೀಸ್‌ ಸೈಬರ್‌ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 85ಸಾವಿರ ರೂ. ನಗದು, ಮೊಬೈಲ್‌ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ನೇತೃತ್ವದಲ್ಲಿ ಪಿಎಸ್‌ಐ ಮುತ್ತರಾಜ್‌, ಎಎಸ್‌ಐ ನಾಸೀರ್‌ ಹುಸೇನ್‌, ಎಸ್‌.ವಿ.ರಘುನಾಥ್‌, ಎಂ.ಸಿ.ಪ್ರಕಾಶ್‌, ವಿನಾಯಕ ಮತ್ತು ಅನ್ವರ್‌ ಪಾಷಾ ತಂಡ ಕಾರ್ಯಾಚರಣೆ ನಡೆಸಿತ್ತು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button