ರಾಜ್ಯ

ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿಬಿದ್ದು ಮೂವರ ಸಾವು, 64 ಮಂದಿ ಗಾಯ

ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿ ,64 ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಾರ್ತುವಾ ಗ್ರಾಮದ ನಡೆದಿದೆ.

ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಡಿಜಿಟಲ್ ಶೋ ನಡೆಯುತ್ತಿದ್ದು ಸುಮಾರು 400 ಮಂದಿ ನೋಡುತ್ತಿದ್ದರು ಹ್ಯಾಲೊಜೆನ್ ಲೈಟ್ ಹೆ ಬಿಸಿಯಾದ ಬಟ್ಟೆದೆ ಬೆಂಕಿ ಹೊತ್ತಿಕೊಂಡು ಇಡೀ ಪೆಂಡಾಲ್ ಬೂದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಔರೈ ಪೊಲೀಸ್ ಠಾಣೆಯಿಂದ ಸಮೀಪದಲ್ಲೇ ಇರುವ ನಾರ್ತುವಾ ಗ್ರಾಮದ ದುರ್ಗಾಪೂಜಾ ಕಾರ್ಯಕ್ರಮ ಕಳೆದ 7 ದಿನದಿಂದ ನಡೆದಿತ್ತು ಅದರೆ ರಾತ್ರಿ ಬೆಂಕಿ ಆನಾಹುತ ಸಂಭವಿಸಿದಾಗ ಭಯಬೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ ಆದರೆ ಅಂಕುಶ್ ಸೋನಿ (12), ಜಯ ದೇವಿ (45) ಮತ್ತು ನವೀನ್ (10) ಸಾವನ್ನಪ್ಪಿದ್ದಾರೆ.

67 ಜನರು ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ತಿಳಿಸಿದ್ದಾರೆ.ಹೆಚ್ಚುವರಿ ಮಹಾನಿರ್ದೇಶಕ ರಾಮ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು ತನಿಖೆ ನಡೆಸುತತ್ತಿದ್ದು ,ಔರೈ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಧಿಷ್ಠಾಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಏಕತಾ ಕ್ಲಬ್ ಪೂಜಾ ಸಮಿತಿಯಿಂದ ದುರ್ಗಾ ಪೂಜೆಯನ್ನು ಆಯೋಜಿಸಲಾಗಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವಂತೆ ಆದಿತ್ಯನಾಥ್ ಅಕಾರಿಗಳಿಗೆ ತಿಳಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button