Educationಅಪರಾಧರಾಷ್ಟ್ರಿಯ

ದಲಿತ ಬಾಲಕಿಯರು ಅಡುಗೆ ಬಡಿಸಿದ್ದಕ್ಕೆ ಎಸೆಯಲು ಸೂಚನೆ

ಉದಯಪುರ: ದಲಿತ ಬಾಲಕಿಯರ ವಿರುದ್ಧ ತಾರತಮ್ಯ ಮಾಡಿದ ಆರೋಪದಲ್ಲಿ ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯ ಅಡುಗೆಯಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಉದಯಪುರದ ಬರೋಡಿ ಪ್ರದೇಶದಲ್ಲಿ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆಯಾತ ಲಾಲಾ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಬಿಸಿಯೂಟವನ್ನು ದಲಿತ ಬಾಲಕಿಯರು ವಿದ್ಯಾರ್ಥಿಗಳಿಗೆ ಬಡಿಸಿದ್ದರು ಎನ್ನಲಾಗಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲಾ ರಾಮ್, ದಲಿತ ಬಾಲಕಿಯರು ಆಹಾರ ಬಡಿಸಿದ್ದರಿಂದ ಅದನ್ನು ತಿನ್ನದೆ ಎಸೆಯುವಂತೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತನ ಸೂಚನೆಯನ್ನು ಪಾಲಿಸಿದ ಮಕ್ಕಳು, ಆಹಾರವನ್ನು ಎಸೆದಿದ್ದಾರೆ.

ಈ ಘಟನೆ ಬಗ್ಗೆ ಇಬ್ಬರು ದಲಿತ ಬಾಲಕಿಯರು ತಮ್ಮ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅವರಿಂದ ಕೆಲವು ಸಂಬಂಧಿಕರ ಕಿವಿಗೆ ಬಿದ್ದಿದೆ. ಆಕ್ರೋಶಗೊಂಡ ಅವರು ಶಾಲೆಗೆ ತೆರಳಿದ್ದು, ಅಡುಗೆಯಾತ ಲಾಲಾ ರಾಮ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅಡುಗೆಯಾತನ ವಿರುದ್ಧ ಗೋಗುಂಡಾ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಯಮಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

“ಈ ಘಟನೆ ನಡೆದಿರುವುದು ಸತ್ಯ ಎನ್ನುವುದು ಕಂಡುಬಂದಿರುವುದರಿಂದ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಬಾಲಕಿಯರು ಬಡಿಸಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆಹಾರ ಎಸೆದಿದ್ದಾರೆ” ಎಂದು ತಿಳಿಸಿದ್ದಾರೆ.

ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಆಯ್ದುಕೊಂಡು, ಅವರ ಮೂಲಕ ಆಹಾರ ಬಡಿಸುವ ಪದ್ಧತಿಯನ್ನು ಅಡುಗೆಯಾತ ಅನುಸರಿಸುತ್ತಿದ್ದ.

ಆದರೆ, ತಮಗೆ ಸರಿಯಾಗಿ ಊಟ ಬಡಿಸುತ್ತಿಲ್ಲ ಎಂದು ದಲಿತ ಬಾಲಕಿಯರು ಆರೋಪಿಸುತ್ತಿದ್ದರಿಂದ, ಅವರೇ ಆಹಾರ ಬಡಿಸಲಿ ಎಂದು ಶಿಕ್ಷಕರೊಬ್ಬರು ಶುಕ್ರವಾರ ಸೂಚಿಸಿದ್ದರು” ಎಂದು ಹೇಳಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button