ರಾಜ್ಯ

ತಿರಂಗ ಯಾತ್ರೆ ಮೂಲಕ ಅಲ್ಲ, ಬೆಲೆ ಏರಿಕೆ ಕಡಿಮೆ ಮಾಡಿ ದೇಶಪ್ರೇಮ ತೋರಿಸಿ: ಬಿಜೆಪಿಗೆ ಪ್ರಕಾಶ್‌ರಾಜ್ ಟಾಂಗ್‌

ಹದಗೆಟ್ಟಿರುವ ಈ ದೇಶದ ವ್ಯವಸ್ಥೆ ಸರಿಪಡಿಸಲು ಯಾವೊಬ್ಬ ನಾಯಕನಿಂದಲೂ ಸಾಧ್ಯವಿಲ್ಲ. ಜನರಲ್ಲೇ ಅರಿವು ಬಂದು ಬದಲಾವಣೆ ಆಗ್ಬೇಕು ಅಂತ ನಟ ಪ್ರಕಾಶ್ ರೈ ಹೇಳಿದರು.ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತಾಡಿದ ಖ್ಯಾತ ಬಹು ಭಾಷಾ ನಟ ಪ್ರಕಾಶ್ ರಾಜ್,

ಈ ದೇಶದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಇದನ್ನು ಸರಿಪಡಿಸಲು ಯಾವೊಬ್ಬ ನಾಯಕನಿಗೂ ಸಾಧ್ಯವಿಲ್ಲ, ಜನರೇ ಮುಂದೆ ಬರಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದ್ರು.

ಮೋದಿಗೆ ಟಾಂಗ್..!ಪ್ರಧಾನ ಮಂತ್ರಿಗಳು ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ. ನಮ್ಮ ದುಡ್ಡು, ನಾನು ವರ್ಷಕ್ಕೆ 38 ಲಕ್ಷ ಟ್ಯಾಕ್ಸ್ ಕಟ್ಟುತ್ತೇನೆ. ಪ್ರಶ್ನಿಸುವುದು ನಮ್ಮ ಹಕ್ಕು. ಒಳ್ಳೆಯ ರಸ್ತೆಯಲ್ಲಿ ನಮ್ಮ ಮಕ್ಕಳು ಓಡಾಡಬಾರದಾ, ನಮ್ಮ ದುಡ್ಡಿನಲ್ಲಿ ಅವರು ಬದುಕೋದು.

ಸಾರ್ವಜನಿಕರ ಹಣದಲ್ಲಿ ಬದುಕುವ ರಾಜಕಾರಣಿಗಳು ಬಂದಾಗ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೀರಾ. ನಮಗಾಗಿ ಯಾಕೆ ಮಾಡಲ್ಲ?ಸಮಾಜದಲ್ಲಿ ಇಂತದ್ದನ್ನು ಪ್ರಶ್ನೆ ಮಾಡಬೇಕು ಎಂದು ಪ್ರಕಾಶ್ ರೈ ಪ್ರತಿಪಾದಿಸಿದ್ರು.

ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ ನಟ ಪ್ರಕಾಶ್ ರಾಜ್, ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸುವುದು ನಿಜವಾದ ದೇಶ ಪ್ರೇಮವಲ್ಲ‌.

ಇದರ ಬದಲು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಬಡತನ ನಿರ್ಮೂಲನೆ ಮಾಡಬೇಕು. ಪಾಲಿತಿನ್ ಸಿಂಥೆಟಿಕ್ ರಾಷ್ಟ್ರ ಧ್ವಜದ ಬದಲು ಖಾದಿ ರಾಷ್ಟ್ರ ಧ್ವಜಕ್ಕೆ ಉತ್ತೇಜನ ನೀಡಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ರು.

ರಂಗಾಯಣದಂತಹ ರಂಗಸಂಸ್ಥೆಗಳಿಗೂ ಇತ್ತೀಚಿನ ದಿನಗಳಲ್ಲಿ ಅನುದಾನ ಸರಿಯಾಗಿ ಕೊಡುತ್ತಿಲ್ಲ. ಇದು ಒಂದು ಸಂಚು, ಹುನ್ನಾರ ಈ ಮೂಲಕ ರಂಗಾಯಣ, ಅಕಾಡೆಮಿಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಪ್ರಕಾಶ್ ರಾಜ್, ಸರ್ಕಾರದ ಈ ನಡೆಯನ್ನು ಖಂಡಿಸುತ್ತೇನೆ ಎಂದು ರಂಗಾಯಣ ಸೇರಿದಂತೆ ವಿವಿಧ ಅಕಾಡೆಮಿಗಳಿಗೆ ನೀಡುತ್ತಿದ್ದ ಅನುದಾನ ಗಣನೀಯ ಇಳಿಕೆ ಕುರಿತು ನಟ ಪ್ರಕಾಶ್ ರೈ ಬೇಸರ ವ್ಯಕ್ತಪಡಿಸಿದರು.

ED ದಾಳಿ ಆಗಲಿ..!ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರೆ ED ದಾಳಿ ಆಗುತ್ತೆ. ನಾನು ಬ್ಲಾಕ್ ಮನಿ ಹೊಂದಿಲ್ಲ, ಸ್ವಚ್ಛವಾಗಿದ್ದೇನೆ. ಯಾವ ದಾಳಿ ಆದ್ರೂ ಹೆದರಲ್ಲ ಅಂತ ಇದೇ ವೇಳೆ ಪ್ರಕಾಶ್ ರಾಜ್ ಟಾಂಗ್ ಕೊಟ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button