
ಕೊಪ್ಪಳ: ತಂದೆಯ ಸಾಲ ತೀರಿಸಲಾಗದಿದ್ದಕ್ಕೆ ಸಾಲ ಕೊಟ್ಟ ದುರುಳರು ಅವರ ಮಗನಿಂದ ಬೆತ್ತಲೆ ಪೂಜೆ ಮಾಡಿಸಿಕೊಂಡ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದ್ದು ನಾಗರಿಕ ಸಮಾಜ ಬೆಚ್ಚಿ ಬಿಳಿಸುವಂತಿದೆ.
ಹಾಸಗಲ್ ಗ್ರಾಮದ ನಿವಾಸಿ 16 ವರ್ಷದ ಬಾಲಕನೊಂದಿಗೆ ಈ ರೀತಿಯಲ್ಲಿ ಅಮಾನವೀಯವಾಗಿ ವರ್ತಿಸಿದ್ದು. ಅದರ ವೀಡಿಯೋವನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಹಾಸಗಲ್ ಗ್ರಾಮದ ನಿವಾಸಿಗಳಾದ ಶರಣಪ್ಪ, ವಿರುಪನಗೌಡ, ಶರಣಪ್ಪ ತಳವರ ಎಂಬುವವರು ಈ ಕೃತ್ಯ ಎಸಗಿದ ಆರೋಪಿಗಳು.
ಕೆಲ ದಿನಗಳ ಹಿಂದೆ ನಿಮ್ಮ ಅಪ್ಪ ಮಾಡಿದ ಸಾಲ ತೀರಬೇಕೆಂದರೇ ಬೆತ್ತಲೆ ಪೂಜೆ ಮಾಡಿಬೇಕು. ಬೆತ್ತಲೆ ಪೂಜೆಯಿಂದ ದುಡ್ಡು ಬರುತ್ತದೆ. ಇದರಿಂದ ಸಾಲ ತೀರುತ್ತದೆ.
ಬಡತನ ಕೂಡ ನಿವಾರಣೆ ಆಗುತ್ತದೆ ಎಂದು ಪ್ರದೀಪ್ ಅನ್ನು ಶರಣಪ್ಪ ಮತ್ತವರ ಗುಂಪು ಪುಸಲಾಯಿಸಿತ್ತ.
ಬಳಿಕ ಹುಬ್ಬಳ್ಳಿಯ ರೂಮ್ ವೊಂದರಲ್ಲಿ ಪ್ರದೀಪ್ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿದ್ದಾರೆ. ಬಳಿಕ ಮೈಗೆ ವಿಭೂತಿ ಕುಂಕುಮ ಹಚ್ಚಿ, ಕುತ್ತಿಗೆಗೆ ಹಾರ ಹಾಕಿ, ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದಿದ್ದಾರೆ.
ಬಳಿಕ ಅದರ ರಸವನ್ನು ಹಿಂಡಿ ತಲೆಗೆ ಸುರಿದು ಪೂಜೆ ಮಾಡುವ ನಾಟಕವಾಡಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಾರದ ಹಿಂದೆ ಈ ಇದರ ವೀಡಿಯೋ ವೈರಲ್ ಆಗಿದ್ದು ನೊಂದ ಪ್ರದೀಪ್ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.