ರಾಜ್ಯ

ಜೈಪುರ ಅರಣ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳ

ರಾಜಸ್ಥಾನದ ಜೈಪುರದ ಸಮೀಪವೇ ಇರುವ ಅಭಯಾರಣ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ. ನಗರ ಪ್ರದೇಶಗಳಲ್ಲಿ ನುಗ್ಗಿ ಸಾಕು ಪ್ರಾಣಿಗಳ ಭೇಟೆಯಾಡುತ್ತಿದೆ ,ಹಲವಡೆ ಮನೆಯೊಳಗೂ ನುಗ್ಗುತ್ತಿದೆ.

ಕಳೆದ 2012ರಿಂದ ಕೇವಲ 12 ಚಿರತೆಗಳ ಸಂಖ್ಯೆ 2022 ರಲ್ಲಿ40 ಕ್ಕೆ ಏರಿದೆ, 10 ವರ್ಷದಲ್ಲಿ 200 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ.ವನ್ಯಜೀವಿ ಪ್ರಿಯರಿಗೆ ಒಳ್ಳೆಯ ಸುದ್ದಿಯಾಗಿದ್ದರೂ, ಅರಣ್ಯ ಸಮೀಪದಲ್ಲಿ ವಾಸಿಸುವ ಜನರಿಗೆ ಇದು ಕಳವಳವನ್ನು ಉಂಟುಮಾಡಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಜಲಾನಾ ಮೀಸಲು ಅರಣ್ಯ ಸಂರಕ್ಷಣಾ ಕಾರ್ಯಗಳಿಂದಾಗಿ ಚಿರತೆಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಬೆಳವಣಿಗೆಯನ್ನು ಕಂಡಿದೆ.ಇತ್ತೀಚಿನ ಎಣಿಕೆಯ ಪ್ರಕಾರ, ಝಲಾನಾ ಚಿರತೆ ಸಂರಕ್ಷಣೆ ಮತ್ತು ಜೈಪುರದ ಅಂಬಾಗಢ ಚಿರತೆ ಸಂರಕ್ಷಣೆ ಎರಡರಲ್ಲೂ 40 ಚಿರತೆಗಳಿವೆ ಎಂದು ಝಲಾನಾ ಚಿರತೆ ಸಂರಕ್ಷಣೆಯ ರೇಂಜರ್ ಜನೇಶ್ವರ್ ಚೌಧರಿ ಹೇಳಿದ್ದಾರೆ.ಅಂಬಾಗಢ್ ಜೈಪುರದಲ್ಲಿ ಜಲಾನಾ ನಂತರ ಬಂದ ಎರಡನೇ ಚಿರತೆ ಸಂರಕ್ಷಣೆಯಾಗಿದೆ.

ಇವೆರಡೂ ಸೇರಿ 36 ಚದರ ಕಿಲೋಮೀಟರ್‍ಗಳಷ್ಟು ಹರಡಿವೆ ಮತ್ತು ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಿಂದ ಬೇರ್ಪಟ್ಟಿವೆ. 36 ಚದರ ಕಿ.ಮೀ ಪ್ರದೇಶದಲ್ಲಿ 10-12 ಚಿರತೆಗಳು ಇರಬೇಕು ಆದರೆ 40 ಚಿರತೆಗಳಿವೆ, ಅರಣ್ಯವು ಆಹಾರ ನೈಸರ್ಗಿಕವಾಗಿ ಸಿಗುತ್ತಲ್ಲ ಎನ್ನಲಾಗುತ್ತದೆ.ಕಂಟ್ರೋಲ್ ರೂಂನಿಂದ ನಿಗಾವಹಿಸುವ ಕ್ಯಾಮರಾಗಳ ಮೂಲಕ ಅರಣ್ಯವನ್ನು ಹಗಲಿರುಳು ನಿಗಾ ಇರಿಸಲಾಗಿದೆ ಎಂದು ಚೌಧರಿ ಹೇಳಿದರು.

ನಿರಂತರ ಕಣ್ಗಾವಲು, ಮೀಸಲು ಸುತ್ತಲಿನ ಗಡಿ ಗೋಡೆ, ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗಣೆಯನ್ನು ನಿಲ್ಲಿಸಿದೆ.ಸ್ಥಳಾವಕಾಶ ಕಡಿಮೆ ಇರುವುದರಿಂದ ಚಿರತೆಗಳು ಅರಣ್ಯ ಪ್ರದೇಶದಿಂದ ಸಮೀಪದ ನಗರ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದು, ಕೆಲವೊಮ್ಮೆ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.

ರಾತ್ರಿ ಸಮಯದಲ್ಲಿ ಚಿರತೆಗಳು ನಗರ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ ಕೆಲವೆಡೆ ಚಿರತೆಗಳು ಜನರ ಮನೆಗಳಿಗೆ ನುಗ್ಗಿದ್ದು, ಯಾರಿಗೂ ಹಾನಿ ಮಾಡಿಲ್ಲ ಆದರೆ ಜನರಲ್ಲಿ ಭಯದ ಅಲೆ ಎಬ್ಬಿಸಿದೆ ಎಂದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button