ಅಪರಾಧರಾಷ್ಟ್ರಿಯ

ಗೋಮಾಂಸ ತಿನ್ನುವಂತೆ ಲಿವ್ ಇನ್ ಸಂಗಾತಿಯಿಂದ ಹಿಂಸೆ: ವ್ಯಕ್ತಿ ಆತ್ಮಹತ್ಯೆ

ಸೂರತ್: 27 ವರ್ಷದ ವ್ಯಕ್ತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಹಿಳೆ ಮತ್ತು ಆಕೆಯ ಸಹೋದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಜರಾತ್‌ನ ಉಧಾನದ ಪಟೇಲ್ ನಗರದಲ್ಲಿನ ತನ್ನ ಮನೆಯಲ್ಲಿ ರಾಹುಲ್ ಸಿಂಗ್ ಅವರು ಜೂನ್ 27ರಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ತನ್ನ ಲಿವ್ ಇನ್ ಸಂಗಾತಿಯಾಗಿದ್ದ ಸೋನಮ್ ಅಲಿ ಮತ್ತು ಆಕೆಯ ಸಹೋದರ ಮುಖ್ತಾರ್ ಅಲಿ ಸೇರಿ ತನಗೆ ಗೋಮಾಂಸ ತಿನ್ನುವಂತೆ ಹಿಂಸಿಸಿ ಬಲವಂತ ಮಾಡಿದ್ದರು ಎಂದು ಆತ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದರು.

ಮೃತ ರಾಹುಲ್ ಸಿಂಗ್ ಅವರ ತಾಯಿ ವೀಣಾದೇವಿ ಅವರು ದೂರು ನೀಡಿದ್ದಾರೆ. ರಾಹುಲ್ ಸಾವಿನ ಬಗ್ಗೆ ಜೂನ್ 27ರಂದು ಪೊಲೀಸರಿಗೆ ಸೋನಮ್ ಮಾಹಿತಿ ನೀಡಿದ್ದಳು.

ಆರಂಭದಲ್ಲಿ ನೀಡಿದ ದೂರಿನ ಪ್ರಕಾರ, ರಾಹುಲ್ ಅವರು ದುಪಟ್ಟಾದಿಂದ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.

ಸುಮಾರು ಒಂದು ವರ್ಷದಿಂದ ರಾಹುಲ್ ಮತ್ತು ಸೋನಮ್ ಪಟೇಲ್ ನಗರದಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಅದಕ್ಕೆ ರಾಹುಲ್ ಕುಟುಂಬದ ವಿರೋಧವಿತ್ತು. ಆಕೆಯನ್ನು ಮದುವೆಯಾಗಲು ಬಯಸಿದ್ದರೆ ಮನೆ ಬಿಟ್ಟುಹೋಗುವಂತೆ ತಾಯಿ ಸೂಚಿಸಿದ್ದರು.

ಉತ್ತರ ಪ್ರದೇಶದ ಪ್ರತಾಪ್‌ಗಡ ಮೂಲದ ರಾಹುಲ್ ಅವರ ತಾಯಿ ಮತ್ತು ಸಹೋದರಿ ಲಿಂಬಾಯತ್ ಪ್ರದೇಶದಲ್ಲಿ ನೆಲೆಸಿದ್ದರು.ಸೋನಮ್ ಜತೆ ವಾಸಿಸಲು ಆರಂಭಿಸಿದ ಬಳಿಕ ರಾಹುಲ್ ತನ್ನ ಮನೆಯವರ ಜತೆ ಸಂಪರ್ಕದಲ್ಲಿ ಇರಲಿಲ್ಲ.

ಆತ ಎಲ್ಲಿದ್ದಾನೆ ಎನ್ನುವುದೂ ಅವರಿಗೆ ತಿಳಿದಿರಲಿಲ್ಲ. ರಾಹುಲ್ ಮತ್ತು ಸೋನಮ್‌ಗೆ ಮದುವೆಯಾಗಿತ್ತೇ ಎನ್ನುವುದು ಕೂಡ ಗೊತ್ತಿಲ್ಲ ಎಂದು ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಗನ ಸಾವಿನ ಬಗ್ಗೆ ವೀಣಾದೇವಿ ಅವರಿಗೆ ಸಂಬಂಧಿಕರೊಬ್ಬರು ಇತ್ತೀಚೆಗಷ್ಟೇ ತಿಳಿಸಿದ್ದರು. ರಾಹುಲ್‌ನ ಫೇಸ್‌ಬುಕ್ ಪುಟದಲ್ಲಿನ ಡೆತ್‌ನೋಟ್ ನೋಡಿದ್ದರಿಂದ ಅವರಿಗೆ ಅದರ ಬಗ್ಗೆ ಗೊತ್ತಾಗಿತ್ತು. “ರಾಹುಲ್‌ನ ಫ್ರೆಂಡ್ ಲಿಸ್ಟ್‌ನಲ್ಲಿದ್ದ ಉತ್ತರ ಪ್ರದೇಶದ ಸಂಬಂಧಿಕರು ಸೂಸೈಡ್ ನೋಟ್ ಗಮನಿಸಿದ್ದರು.

ರಾಹುಲ್ ಆತ್ಮಹತ್ಯೆ ಮಾಡಿಕೊಂಡ ದಿನವೇ ಅದನ್ನು ಪೋಸ್ಟ್ ಮಾಡಿದ್ದರು ಎಂದು ಕುಟುಂಬ ತಿಳಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಮನೆಯವರು ರಾಹುಲ್ ಸಿಂಗ್ ಅವರ ಫೇಸ್‌ಬುಕ್ ವಿವರಗಳನ್ನು ನೀಡಿದೆ. ಆ ಪೋಸ್ಟ್‌ನಲ ದಿನಾಂಕ ಮತ್ತು ಸಮಯವನ್ನು ನಿಖರವಾಗಿ ತಿಳಿದುಕೊಳ್ಳಲು ನಾವು ಸಾಮಾಜಿಕ ಮಾಧ್ಯಮ ತಾಣದೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.

“ಬೀಫ್ ತಿನ್ನದೆ ಇದ್ದರೆ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ರಾಹುಲ್ ಆರೋಪಿಸಿದ್ದಾರೆ. ಚಿತ್ರಹಿಂಸೆಯ ಕಾರಣದಿಂದ ತನ್ನ ಜೀವನ ಅಂತ್ಯಗೊಳಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ತನಗೆ ಯಾವ ರೀತಿ ಹಿಂಸೆ ನೀಡಲಾಗಿತ್ತು ಎಂದು ಆತ ವಿವರಿಸಿಲ್ಲ” ಎಂದು ಹೇಳಿದ್ದಾರೆ.

ರಾಹುಲ್ ಮತ್ತು ಸೋನಮ್ ಒಬ್ಬರೂ ಒಂದೇ ಕಡೆ ಕೆಲಸ ಮಾಡುವಾಗ ಪರಿಚಿತರಾಗಿದ್ದರು. ಉಡುಪು ಡೈಯಿಂಗ್ ಮಿಲ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಸೋನಮ್‌ಳನ್ನು ಮದುವೆಯಾಗುವ ಬಗ್ಗೆ ಹೇಳಿದಾಗ, ಮನೆಯವರು ಅದನ್ನು ವಿರೋಧಿಸಿದ್ದರು.

ಬಳಿಕ ಅವರಿಬ್ಬರೂ ಲಿವ್ ಇನ್ ಟುಗೆದರ್‌ನಲ್ಲಿದ್ದರು. ಮದುವೆಯಾಗಿದ್ದಕ್ಕೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button