
ಬೆಂಗಳೂರು: ಕೇವಲ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ರೌಡಿ ಗುಂಪುಗಳ ನಡುವೆ ಸಿನಿಮಾ ಸ್ಟೈಲ್ ನಲ್ಲಿ ಬಡಿದಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಗಾಂಧಿನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ಘಟನೆ ನಡೆದಿದೆ.
ರಾಜರಾಜೇಶ್ವರಿ ನಗರ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಕೆಂದ ಹಾಗೂ ಶ್ರೀರಾಮಂಪುರ ರೌಡಿಶೀಟರ್ ಯಶವಂತ ನಡುವೆ ಗ್ಯಾಂಗ್ ವಾರ್ ನಡೆದಿದೆ.ರೌಡಿಗಳು ಮದ್ಯದ ಅಮಲಲ್ಲಿ ತೆಲುತ್ತಿದ್ದರು.ಗುರಾಯಿಸಿದ ರಾಘವೇಂದ್ರ, ಸ್ನೇಹಿತರಾದ ಆಕಾಶ್,ನವೀನ್ ಮಧ್ಯರಾತ್ರಿ 12.30 ಕ್ಕೆ ಸೆವೆನ್ ಹಿಲ್ಸ್ ಬಾರ್ ಗೆ ಪಾರ್ಟಿಗೆ ಬಂದಿದ್ದರು.
ಈ ವೇಳೆ ಬಾತ್ ರೂಮ್ ಗೆ ಹೋದಾಗ ಅಲ್ಲಿದ್ದ ಯಶವಂತ್ ರಾಘವೇಂದ್ರನನ್ನು ಗುರಾಯಿಸಿದ್ದ. ಏಯ್ ಯಾಕೋ ಗುರಾಯಿಸೋದು ಎಂದು ಕೇಳಿದಕ್ಕೆ ಯಶವಂತ್ ಹಾಗೂ ಸ್ನೇಹಿತರು ಮದ್ಯದ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ.
ನಂತರ ಅಲ್ಲಿಂದ ಬಾರ್ ಕೆಳಗೆ ಬಂದಾಗ ರಾಘವೇಂದ್ರನ ಕಡೆಯವರು ಯಶವಂತ್ ಗೆ ಬಾಟಲ್ ನಿಂದ ತಲೆಗೆ ಹೊಡೆದಿದ್ದಾರೆ.ಇನ್ನೂ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.