ಅಪರಾಧಬೆಂಗಳೂರು

ಗಂಡನ ಕೊಲೆಗೆ ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿದ್ದ ಮಹಿಳೆ ಜೈಲು ಸೇರಿದ್ದಾಳೆ

ಬೆಂಗಳೂರು: ಗಂಡನ ಕೊಲೆಗೆ ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿದ್ದ ಮಹಿಳೆ ಜೈಲು ಸೇರಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಪ್ರೇಯಸಿ ಮಾತು ಕೇಳಿ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದ ಪ್ರಿಯಕರ ಜೀವ ಕಳೆದುಕೊಂಡಿದ್ದಾನೆ.

ದೊಡ್ಡಬಿದರಕಲ್ಲು ನಿವಾಸಿ ಅನುಪಲ್ಲವಿ ಈ ಪ್ರಕರಣದ ಖಳನಾಯಕಿ. ಗಂಡ ನವೀನ್‌ಕುಮಾರ್‌ನನ್ನು ಕೊಲ್ಲುವ ಅನುಪಲ್ಲವಿ ಸಂಚಿಗೆ ಸಾಥ್‌ ನೀಡಿದ್ದ ಆಕೆಯ ತಾಯಿ ಅಮ್ಮೋಜಮ್ಮ, ಸುಪಾರಿ ಪಡೆದಿದ್ದ ಹರೀಶ್‌, ಮುಗಿಲನ್‌, ನಾಗರಾಜು ಎಂಬುವವರನ್ನು ಬಂಧಿಸಿರುವ ಪೀಣ್ಯ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಅನುಪಲ್ಲವಿ ಹಾಗೂ ನವೀನ್‌ ಕುಮಾರ್‌ ದಂಪತಿ ದೊಡ್ಡಬಿದರ ಕಲ್ಲುಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನವೀನ್‌ಕುಮಾರ್‌ ಕಾರು ಚಾಲಕರಾಗಿದ್ದರು. ಈ ಮಧ್ಯೆ ಅನುಪಲ್ಲವಿ ಮತ್ತು ಹಿಮವಂತ್‌ಕುಮಾರ್‌ ನಡುವೆ ಪ್ರೇಮ ಏರ್ಪಟ್ಟಿತ್ತು. ಪ್ರಿಯಕರ ಹಿಮವಂತ್‌ ಜತೆ ವಾಸಿಸಲು ನಿರ್ಧರಿಸಿದ್ದ ಪಲ್ಲವಿ ಗಂಡ ನವೀನ್‌ ಹತ್ಯೆ ಮಾಡುವ ಸ್ಕೆಚ್‌ ಹಾಕಿದ್ದಳು. ಆಕೆಯ ಈ ಸಂಚಿಗೆ ತಾಯಿ ಅಮ್ಮೋಜಮ್ಮ, ಪ್ರಿಯಕರ ಒಪ್ಪಿದ್ದರು.

ಎಣ್ಣೆ ಪಾರ್ಟಿ, ಪ್ಲ್ಯಾನ್‌ ಪ್ಲಾಫ್‌ಪಲ್ಲವಿ ಸೂಚನೆಯಂತೆ ಹಿಮವಂತ್‌, ನವೀನ್‌ ಕೊಲೆಗೆ ಹರೀಶ್‌ ಹಾಗೂ ನಾಗರಾಜುವಿಗೆ 1 ಲಕ್ಷ ರೂ.ಗಳಿಗೆ ಸುಪಾರಿ ನೀಡಿದ್ದ. ಅದರಂತೆ ಜುಲೈ 23ರಂದು ನವೀನ್‌ನನ್ನು ಆರೋಪಿಗಳಾದ ಹರೀಶ್‌, ನಾಗರಾಜು ಅಪಹರಿಸಿ ಚೆನ್ನೈನ ಲಾಡ್ಜ್‌ವೊಂದರಲ್ಲಿ ಕೂಡಿಹಾಕಿದ್ದರು. ಈ ಕೃತ್ಯಕ್ಕೆ ಮುಗಿಲನ್‌ ಸಹಕರಿಸಿದ್ದ.

ಆರೋಪಿಗಳು ಎಣ್ಣೆ ಪಾರ್ಟಿ ಮಾಡುವಾಗ ನವೀನ್‌ ಕೂಡ ಜತೆಯಾಗಿದ್ದು, ಅವರಿಗೆ ಸ್ನೇಹಿತನಾಗಿಬಿಟ್ಟಿದ್ದ. ಹೀಗಾಗಿ ನವೀನ್‌ ಕೊಲ್ಲುವ ನಿರ್ಧಾರದಿಂದ ಆರೋಪಿಗಳು ಹಿಂದೆ ಸರಿದು ಸುಪಾರಿ ವಿಚಾರ ತಿಳಿಸಿದ್ದರು.

ಆದರೆ, ಸುಪಾರಿಗೆ ಒಪ್ಪಿಕೊಂಡಿರುವ 1 ಲಕ್ಷ ರೂ. ಹಣ ಪಡೆದುಕೊಳ್ಳುತ್ತೇವೆ. ಹೀಗಾಗಿ ನೀನು ಸತ್ತವನಂತೆ ನಟನೆ ಮಾಡು. ನಾವು ಹಿಮವಂತ್‌ಗೆ ವಿಡಿಯೋ ಕರೆ ಮಾಡಿ ನಂಬಿಸುತ್ತೇವೆ ಎಂದು ತಿಳಿಸಿದ್ದರು. ಇದಕ್ಕೆ ನವೀನ್‌ ಒಪ್ಪಿಕೊಂಡಿದ್ದರು.

”ಲಾಡ್ಜ್‌ನಲ್ಲಿ ನವೀನ್‌ನನ್ನು ಮಲಗಿಸಿ ಆತನ ಮುಖ ಎದೆಭಾಗ, ತಲೆಯ ತುಂಬಾ ಟೊಮ್ಯಾಟೋ ಸಾಸ್‌ ಸುರಿದಿದ್ದರು. ಬಳಿಕ ಹಿಮಂತ್‌ಗೆ ವಿಡಿಯೋ ಕಾಲ್‌ ಮಾಡಿ, ನವೀನ್‌ ಕೊಲೆ ಮಾಡಿದ್ದೇವೆ ಎಂದು ಹೇಳಿದ್ದರು” ಎಂದು ಪೊಲೀಸರು ತಿಳಿಸಿದರು.

ಬಯಲಾಗಿದ್ದು ಹೇಗೆ?ಆಗಸ್ಟ್‌ 2ರಂದು ಪೀಣ್ಯ ಠಾಣೆ ಪೊಲೀಸ್‌ ಠಾಣೆಯಲ್ಲಿ ನವೀನ್‌ ಸಹೋದರಿ ಜುಲೈ 23ರಿಂದ ತನ್ನ ಅಣ್ಣ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಇದರ ನಡುವೆ ಆಗಸ್ಟ್‌ 3ರಂದು ಚೆನ್ನೈನಿಂದ ವಾಪಸ್‌ ಬಂದಿದ್ದ ನವೀನ್‌ ಪೊಲೀಸ್‌ ಠಾಣೆಗೆ ಹೋಗಿ ತನ್ನ ಹತ್ಯೆಗೆ ಪತ್ನಿ ಹಾಗೂ ಆಕೆಯ ಪ್ರಿಯಕರ ನಡೆಸಿರುವ ಸಂಚಿನ ಮಾಹಿತಿಯನ್ನು ತಿಳಿಸಿದ್ದ.

ಈ ಬೆನ್ನಲ್ಲೇ ಪ್ರಕರಣ ತನಿಖೆ ಚುರುಕುಗೊಳಿಸಿದ ಪೊಲೀಸರು, ನವೀನ್‌ ಹತ್ಯೆಗೆ ಸಂಚು ರೂಪಿಸಿದ್ದ ಅನುಪಲ್ಲವಿ, ಅಮ್ಮೋಜಮ್ಮ ಸೇರಿ ಇತರ ಆರೋಪಿಗಳನ್ನು ಬಂಧಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಡಿಯೋ ಕಾಲ್‌ಗೆ ಹೆದರಿ ಸುಸೈಡ್‌ನವೀನ್‌ ಹತ್ಯೆ ಸಂಚಿನಲ್ಲಿ ಆರೋಪಿಯಾಗಿದ್ದ ಹಿಮವಂತ್‌ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದಾಗ ಆತ ಆಗಸ್ಟ್‌ 1ರಂದು ಬಾಗಲಗುಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಜುಲೈ 27ರಂದು ನವೀನ್‌ ಹತ್ಯೆಯ ನಾಟಕದ ವಿಡಿಯೋ ನೋಡಿದ್ದ ಹಿಮವಂತ್‌ ಹೆದರಿಕೊಂಡಿದ್ದ.

ನವೀನ್‌ ನಿಜವಾಗಿಯೂ ಕೊಲೆಯಾಗಿದ್ದು, ಪೊಲೀಸರು ತನ್ನನ್ನು ಅರೆಸ್ಟ್‌ ಮಾಡುತ್ತಾರೆ ಎಂದು ಹೆದರಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button