ನಗರದ ತನುಮನ ಸಂಸ್ಥೆ.ಧಮ್ಮ ಚಕ್ರ ಪವತ್ತನ ದಿನದ ಅಂಗವಾಗಿ ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ರವರ ಸಾರಥ್ಯದಲ್ಲಿ ಜಗ ನಡೆಯಲಿ ಬುದ್ಧನ ಕಡೆಗೆ ಎಂಬ ಸಂಗೀತ ಕಾರ್ಯಕ್ರಮವನ್ನ 13.07.22 ಬುಧವಾರ ಸಂಜೆ 5.30 ಕ್ಕೆ ಮೈಸೂರಿನ ಅಶೋಕ ವೃತ್ತ ದಲ್ಲಿರುವ ವಿಶ್ವ ಮೈತ್ರಿ ಬುದ್ಧ ವಿಹಾರ ದಲ್ಲಿ ಹಮ್ಮಿಕೊಂಡಿದ್ದು.
ಪೂಜ್ಯ ಜ್ಞಾನ ಪ್ರಕಾಶ ಸ್ವಾಮಿಜೀ ರವರು ಸಾನಿಧ್ಯ ವಹಿಸಲಿದ್ದು.ಮಾಜಿ ಸಂಸದ ರಾದ ಆರ್.ಧ್ರುವನಾರಾಯಣ ಉದ್ಘಾಟನೆಯನ್ನು ಮಾಡಲಿದ್ದು.ಅಧ್ಯಕ್ಷತೆ ಯನ್ನ ಮಾಜಿ ಮಹಾ ಪೌರ ಪುರುಷೋತ್ತಮ್ ವಹಿಸಲಿದ್ದಾರೆ.
ಕಾರ್ಯಕ್ರಮ ದಲ್ಲಿ ಡಾ. ಮೈಸೂರು ಗುರುರಾಜ್.ಡಾ ಕೆ.ಪಿ ಮಹಾದೇವಯ್ಯ.ತುಂಬಲ ರಾಮಣ್ಣ.ಕೃಷಿ ವಿಜ್ಞಾನಿ ಡಾ. ಹೆಚ್.ಎಮ್.ಪಲ್ಲವಿ.ವಕೀಲ ವಿಷ್ಣುವರ್ಧನ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಬುದ್ಧ ನಾಡ ಭೂಷಣ.ಪ್ರಶಸ್ತಿ ನೀಡಿ.
ಗೌರವ ಸಮರ್ಪಣೆ ಮಾಡಲಾಗುವುದು.ಗಾಯಕ ಲಕ್ಷ್ಮಿರಾಮ್. ಲಾಸ್ಯ.ಮಾದೆಶ್ ಚಿಕ್ಕ ನಂದಿ.ಗಣೇಶ್ ಮಲಾರ ಮುಂತಾದ ವರು ಬುದ್ಧ ಗೀತೆ ಗಳನ್ನು ಪ್ರಸ್ತುತ ಪಡಿಸಲಿದ್ದಾರೆ.ಎಂದು ಸಂಸ್ಥೆಯ ಅಧ್ಯಕ್ಷ ವಿ.ಸೋಮಣ್ಣ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.