
ಬೆಂಗಳೂರು : ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು, ಜಾಹಿರಾತಿನಲ್ಲಿ ಕನ್ನಡ ಕಡ್ಡಾಯ, ಉನ್ನತ ಶಿಕ್ಷಣದಲ್ಲಿ ಮಾತೃ ಭಾಷೆಗೆ ಆದ್ಯತೆ, ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶ್ರೀರಾಮುಲು,ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಕನ್ನಡಕ್ಕಾಗಿ ಧ್ವನಿ ಎತ್ತುಅಲ್ಲಿ ಪಾಂಚಜನ್ಯ ಮೊಳಗುವುದುಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕುಅದೇ ಗೋವರ್ಧನಗಿರಿಯಾಗುವುದು.
ಕನ್ನಡದ ಬಗೆಗಿನ ಅಭಿಮಾನ ಮೊಳೆಯುವಂತೆ ಮಾಡಲು ರಸಋಷಿ ಕುವೆಂಪು ಅವರು ಆಡಿದ ಮಾತುಗಳಿವು. ಈ ಕವಿ ವಾಣಿಗೆ ಪೂರಕ ಎಂಬಂತೆ, ನಮ್ಮ ಸರ್ಕಾರ ಕನ್ನಡವನ್ನು ಪ್ರತಿಯೊಂದು ಆಡಳಿತ ಹಂತದಲ್ಲಿ ಅನುಷ್ಠಾನ ಮಾಡಲು ಮುಂದಾಗಿದೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು, ಜಾಹಿರಾತಿನಲ್ಲಿ ಕನ್ನಡ ಕಡ್ಡಾಯ, ಉನ್ನತ ಶಿಕ್ಷಣದಲ್ಲಿ ಮಾತೃ ಭಾಷೆಗೆ ಆದ್ಯತೆ, ಪ್ರತಿಯೊಂದು ಹಂತದಲ್ಲೂ ಕನ್ನಡವನ್ನು ಅನುಷ್ಠಾನ ಮಾಡದಿದ್ದರೆ ದಂಡ ವಿಧಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ.
ಕನ್ನಡ ಜಾರಿ, ಕನ್ನಡದ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಪ್ರಾಕಾರ ರಚನೆ, ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಮೀಸಲು ಮಾಡಲೇಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲು ಸೌಲಭ್ಯ ಸಿಗಲಿದೆ.
ನಿಯಮ ಉಲ್ಲಂಘಿಸಿದ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ ಮೊದಲಿಗೆ 5 ಸಾವಿರ, 2ನೇ ಹಂತದಲ್ಲಿ 10 ಸಾವಿರ, 3ನೇ ಹಂತದಲ್ಲಿ 20 ಸಾವಿರ ದಂಡ ವಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದ್ದಾರೆ.
ಇದುವರೆಗೂ ಆಡಳಿತ ನಡೆಸಿದವರು ಕನ್ನಡ ಎಂದರೆ ಕೇವಲ ಅನುಷ್ಠಾನ ಕಡ್ಡಾಯ ಎಂಬ ಹೇಳಿಕೆಗೆ ಸೀಮೀತವಾಗಿದ್ದರು.
ನಮ್ಮ ಜನಪ್ರಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇದಕ್ಕಾಗಿಯೇ ವಿಧೇಯಕ ತಂದಿರುವುದು ದಾಖಲೆಯೇ ಸರಿ.
ಇದಕ್ಕಾಗಿ ನನ್ನ ಸಂಪುಟದ ಸಚಿವರು, ಶಾಸಕರು ಹಾಗೂ ನಮ್ಮ ಪಕ್ಷದ ಎಲ್ಲ ಮುಖಂಡರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.