ಅಪರಾಧಬೆಂಗಳೂರು

ಈ ಊರಿನಲ್ಲಿ ದಲಿತರಿಗೆ ಕೆರೆಯೇ ಸ್ಮಶಾನ ! ಕುಡಿಯಲು ಕಲುಷಿತ ನೀರೇ ಗತಿ!!

ಬೆಂಗಳೂರು: ಕೆಂಗೇರಿಯ ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಪಾಳ್ಯ ಗ್ರಾಮದಲ್ಲಿ ಪರ್ಯಾಯ ಜಾಗವಿಲ್ಲದೆ ದಲಿತರು ಕೆರೆಯಲ್ಲೇ ಶವಸಂಸ್ಕಾರ ಮಾಡಬೇಕಾದ ದಯನೀಯ ಸ್ಥಿತಿ ಎದುರಾಗಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆಂದು ಪ್ರತ್ಯೇಕ ಜಾಗವಿಲ್ಲ.

ದಲಿತರ ಹೊರತುಪಡಿಸಿ ಇತರ ಸಮುದಾಯದವರು ಸರಕಾರಿ ಜಾಗವನ್ನು ಸ್ಮಶಾನವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿಶವ ಸಂಸ್ಕಾರ ಮಾಡಲು ದಲಿತರಿಗೆ ಅವಕಾಶವಿಲ್ಲ.

ಹೀಗಾಗಿ ದಲಿತರು ರಸ್ತೆ ಬದಿಯಲ್ಲಿ, ಕಾಡಿನ ಅಂಚಿನಲ್ಲಿ ಇಲ್ಲವೇ ಕೆರೆ ಜಾಗದಲ್ಲಿಶವ ಸಂಸ್ಕಾರ ಮಾಡುವ ಅನಿವಾರ್ಯತೆ ಇದೆ.

ದಲಿತರು ಕೆ.ಗೊಲ್ಲಹಳ್ಳಿ ಗ್ರಾಮದ ಕೆರೆ ಜಾಗದಲ್ಲಿ ಶವಗಳ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಇದೇ ಕೆರೆ ನೀರನ್ನು ದಲಿತ ಕಾಲೊನಿಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಶವ ಹೂಳಿದ್ದರಿಂದ ನೀರು ಕಲುಷಿತಗೊಂಡಿದ್ದು, ಆರೋಗ್ಯ ಸಮಸ್ಯೆಯ ಆತಂಕವೂ ಕಾಡುತ್ತಿದೆ.”ಗ್ರಾಮದ ಬಳಿಯಿರುವ ಕೆ.ಗೊಲ್ಲಹಳ್ಳಿ ಸರ್ವೆ ನಂಬರ್‌ 26 ರಲ್ಲಿಐದಾರು ಎಕರೆ ಸರಕಾರಿ ಜಮೀನಿದೆ.

ದಲಿತರಿಗಾಗಿ ಪ್ರತ್ಯೇಕ ಸ್ಮಶಾನಕ್ಕಾಗಿ ಜಮೀನು ಮೀಸಲಿರಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಐದಾರು ತಿಂಗಳಲ್ಲಿಸುಮಾರು 8 ಜನ ಸಾವನ್ನಪ್ಪಿದ್ದಾರೆ.

ಮಳೆಯಿಂದಾಗಿ ಕೆರೆ ಜಾಗದಲ್ಲೂಶವ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಶವ ಸಂಸ್ಕಾರಕ್ಕಾಗಿ ಪರದಾಡುವಂತಾಗಿದೆ,” ಎಂದು ಮಾರಪ್ಪ ಬೇಸರ ವ್ಯಕ್ತಪಡಿಸಿದರು.

ದಲಿತ ಸಮುದಾಯದವರ ಕಷ್ಟ ಕೇಳುವವರೇ ಇಲ್ಲದಂತಾಗಿದೆ. ಕೆರೆಯಲ್ಲಿ ಶವ ಸಂಸ್ಕಾರ ಮಾಡುವಂತಾಗಿರುವುದು ನಿಜಕ್ಕೂ ವಿಪರ್ಯಾಸ. ಸಮಸ್ಯೆಗೆ ಪರಿಹಾರ ಒದಗಿಸುವಲ್ಲೂನಾವು ಅಸಹಾಯಕರಾಗಿದ್ದೇವೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button