ಅಪ್ಪು ಕನಸಿನ ‘ಗಂಧದ ಗುಡಿ’ ನೋಡಲು ಜನಸಾಗರ

ಅಪ್ಪು ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ( Gandhada Gudi ) ಅದ್ದೂರಿಯಾಗಿ ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆ ಮಾರ್ನಿಂಗ್ ಶೋ ( 6 ಗಂಟೆಗೆ ) ನಡೆದಿದ್ದು, ಎಲ್ಲ ಟಿಕೆಟ್ ಸೋಲ್ಡ್ ಔಟ್ ಆಗಿವೆ. ನಿನ್ನೆ ರಾತ್ರಿಯೇ ( ಅಕ್ಟೋಬರ್ 27 ) ‘ಗಂಧದ ಗುಡಿ’ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಸೆಲೆಬ್ರಿಟಿಗಳು ಈ ಚಿತ್ರವನ್ನು ವೀಕ್ಷಣೆ ಮಾಡಿದ್ದರು.
ರಿಯಲ್ ಪುನೀತ್ ರಾಜ್ಕುಮಾರ್ ದರ್ಶನಇಷ್ಟುದಿನ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ( Puneeth Rajkumar ) ಬೇರೆ ಬೇರೆ ಪಾತ್ರಗಳಲ್ಲಿ ನೋಡುತ್ತಿದ್ದ ವೀಕ್ಷಕರು ‘ಗಂಧದ ಗುಡಿ’ಯಲ್ಲಿ ಪುನೀತ್ರನ್ನು ಪುನೀತ್ರಾಗಿಯೇ ನೋಡಬಹುದು. ಇದು ಸಿನಿಮಾವಲ್ಲ, ಅದ್ಭುತ ಅನುಭವ, ಮೊದಲೇ ಬರೆದಿಟ್ಟ ಡೈಲಾಗ್ ಇಲ್ಲಿಲ್ಲ.
ಇದನ್ನು ಅಪ್ಪು ಕಾಡು ಮೇಡುಗಳಲ್ಲಿ ಮಾಡಿದ ಜರ್ನಿ ಎನ್ನಬಹುದು..ಗಂಧದ ಗುಡಿ’ಯಲ್ಲಿ ಏನಿದೆ?ಈ ಸಾಕ್ಷ್ಯಚಿತ್ರದ ಅವಧಿ 1 ಗಂಟೆ 37 ನಿಮಿಷಗಳು. ಕರ್ನಾಟಕದ ಅರಣ್ಯ ಸಂಪತ್ತು, ಜೀವ ವೈವಿಧ್ಯತೆ, ಪ್ರಾಣಿ-ಪಕ್ಷಿಗಳು, ಪಶ್ಚಿಮ ಘಟ್ಟಗಳು, ಕರಾವಳಿ ತೀರ, ಮಲೆನಾಡು, ಕುರುಚುಲು ಕಾಡು, ಬೆಟ್ಟ-ಗುಡ್ಡ, ತುಂಗಭದ್ರಾ ನದಿ, ಕಾಳಿ ನದಿ, ಆನೆ ಬಿಡಾರಗಳು.
ನಾಗರಹೊಳೆಯಿಂದ ಅಣ್ಣಾವ್ರ ಹುಟ್ಟೂರು ಗಾಜನೂರು ತಲುಪಿ, ಅಲ್ಲಿಂದ ಮಲೆನಾಡು, ವಿಜಯನಗರ, ದಾಂಡೇಲಿ, ಬಿಆರ್ಟಿ ಟೈಗರ್ ರಿಸರ್ವ್, ಜೋಗ ಹೀಗೆ ಸಾಕಷ್ಟು ಸ್ಥಳಗಳು ಇಲ್ಲಿವೆ.ರಾಜ್ಯ, ದೇಶ ವಿದೇಶಗಲ್ಲಿಯೂ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಪ್ರದರ್ಶನ ಕಾಣುತ್ತಿದೆಥಿಯೇಟರ್ನಲ್ಲಿ ಅಪ್ಪುವಿಗೆ ಕ್ಯಾಂಡಲ್ ಹಚ್ಚಿ ನಮನ ಸಲ್ಲಿಸಲಾಗುತ್ತಿದೆ.ಅಪ್ಪು ಅವರನ್ನು ಕೊನೆಯ ಬಾರಿ ತೆರೆ ಮೇಲೆ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆಬೆಂಗಳೂರಿನ ಥಿಯೇಟರ್ನಲ್ಲಿ 3 ತಿಂಗಳ ಮಗುವಿನ ಕೊರಳಲ್ಲಿ ‘ಕರ್ನಾಟಕ ರತ್ನ’ ಅಕ್ಷರ ಇರುವ ಚೈನ್ ಕಂಡುಬಂದಿದೆ.
ಚಿತ್ರದುರ್ಗದಲ್ಲಿ ಪುನೀತ್ ರಾಜ್ಕುಮಾರ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಲಾಗುತ್ತಿದೆಬಳ್ಳಾರಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ‘ಗಂಧದ ಗುಡಿ’ಯನ್ನು ನೋಡಲು ಬಂದ ಜನಸಾಗರವನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.ತುಮಕೂರಿನ ಥಿಯೇಟರ್ಗೆ ಆನೆಯೊಂದು ಬಂದು ಎಲ್ಲರ ಗಮನ ಸೆಳೆಯುತ್ತಿದೆ.ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ, ಪುನೀತ್ ಕಿರಿಯ ಪುತ್ರಿ ವಂದಿತಾ, ಯುವರಾಜ್ಕುಮಾರ್, ರಮ್ಯಾ, ನೆನಪಿರಲಿ ಪ್ರೇಮ್, ದೇವರಾಜ್, ನಿಶ್ವಿಕಾ ನಾಯ್ಡು, ಸುಧಾ ಬೆಳವಾಡಿ, ಗುರುಕಿರಣ್, ಅಜಯ್ ರಾವ್, ವಿನಯ್ ರಾಜ್ಕುಮಾರ್, ಸುಧಾ ಮೂರ್ತಿ, ‘ಬಹದ್ದೂರ್’ ಚೇತನ್, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ಸಂತೋಷ್ ಆನಂದ್ರಾಮ್, ವಿಜಯ್ ರಾಘವೇಂದ್ರ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ರಕ್ಷಿತ್ ಶೆಟ್ಟಿ ಮುಂತಾದವರು ಪ್ರೀಮಿಯರ್ ಶೋನಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.
ಗಂಧದ ಗುಡಿ’ ಸಿನಿಮಾ ಬಗ್ಗೆ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡ ನಿರ್ದೇಶಕ ಅಮೋಘವರ್ಷ